ದುರಿತ ಗಜಕೆ ಪಂಚಾನನ

ದುರಿತ ಗಜಕೆ ಪಂಚಾನನ

( ರಾಗ ಮಧ್ಯಮಾವತಿ. ಅಟ ತಾಳ) ದುರಿತ ಗಜಕೆ ಪಂಚಾನನ, ನರ- ಹರಿಯೆ ದೇವರ ದೇವ ಗಿರಿಯ ಗೋವಿಂದ ||ಪ|| ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ ಎತ್ತದೆ ನೆಲಕೆ ಬಿಸುಡುವರೆ ಗೋವಿಂದ || ಅರಸು ಮುಟ್ಟಲು ದಾಸಿ ರಂಭೆಯು ದೇವ ಪರಶು ಮುಟ್ಟಲು ಲೋಹ ಹೊನ್ನು ಗೋವಿಂದ || ಹೆಸರುಳ್ಳ ನದಿಗಳನೊಳಗೊಂಬ ಜಲಧಿಯು ಬಿಸುಡುವನೆ ಕಾಲುಹೊಳೆಗಳನು ಗೋವಿಂದ || ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ ನಿನ್ನನು ಮೊರೆಹೋಗಲೇಕೆ ಗೋವಿಂದ || ಸ್ಮರಣೆಮಾತ್ರಕಜಾಮಿಳಗೆ ಮುಕ್ತಿಯನಿತ್ತೆ ವರದ ಪುರಂದರವಿಠಲ ಗೋವಿಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು