ದಾಸನ ಮಾಡಿಕೋ ಎನ್ನ

ದಾಸನ ಮಾಡಿಕೋ ಎನ್ನ

(ರಾಗ ನಾದನಾಮಕ್ರಿಯೆ ಅಟತಾಳ) ದಾಸನ ಮಾಡಿಕೋ ಎನ್ನ , ಸ್ವಾಮಿ ಸಾಸಿರನಾಮದ ವೆಂಕಟರಮಣ || ದುರ್ಬುದ್ಧಿಗಳನೆಲ್ಲ ಬಿಡಿಸೋ , ನಿನ್ನ ಕರುಣಕವಚವೆನ್ನ ಹರಣಕ್ಕೆ ತೊಡಿಸೋ ಚರಣಸೇವೆ ಎನಗೆ ಕೊಡಿಸೋ , ಅಭಯ - ಕರಪುಷ್ಪವನೆನ್ನ ಶಿರದಲ್ಲಿ ಮುಡಿಸೋ || ದೃಢಭಕ್ತಿ ನಿನ್ನಲ್ಲಿ ಬೇಡಿ , ನಾ- ನಡಿಗೆರಗುವೆನಯ್ಯ ಅನುದಿನ ಪಾಡಿ ಕಡೆಗಣ್ಣಿಲೇಕೆನ್ನ ನೋಡಿ , ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ || ಮೊರೆಹೊಕ್ಕವರ ಕಾವ ಬಿರುದು, ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು ದುರಿತಗಳನೆಲ್ಲವ ತರಿದು , ಸಿರಿ ಪುರಂದರವಿಟ್ಠಲ ಎನ್ನನು ಪೊರೆದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು