ದಾನವನ ಕೊಂದದ್ದಲ್ಲ

ದಾನವನ ಕೊಂದದ್ದಲ್ಲ

(ರಾಗ ತೋಡಿ. ಆದಿ ತಾಳ) ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳು ಬಿಚ್ಚಿ ನೋಡಿದರಿನ್ನೆಷ್ಟು ಇದ್ದಾವೊ ಎಂದು ನೆಂಟತನವು ಬೆಳೆಯ ಬೇಕೆಂದು ಕರುಳ ಕೊರಳೊಳು ಗಂಟು ಹಾಕಿ ಕೊಂಡನಲ್ಲದೆ ದೇಹ ಸಂಬಂಧದಿಂದ ತೊರವೆಯ ನರಸಿಂಹ ಪ್ರಹ್ಲಾದ ಪಾಲಕ ಉರಿಮೋರೆ ದೇವ ನಮ್ಮ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು