ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ

ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ

( ರಾಗ ಮುಖಾರಿ ಝಂಪೆ ತಾಳ) ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ , ಅ ಜ್ಞಾನ ಮೂಢರಿಗೆ ಹರಿತನದ ಬಲವು ||ಪ|| ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವದಾಯ್ತು ಇಂದ್ರನಿಗೆ ವಿಧಿಕಾಡಿ ಭಂಗಪಡಿಸಿತು ಚಂದದಲಿ ಪಾಂಡವರ ವನವಾಸ ಮಾಡಿಸಿತು ಅಂದು ಲಲನೆ ಸೀತೆಯನ್ನು ಲಂಕೆಯಲಿಡಿಸಿತು || ಹಿಂದಕ್ಕೆ ಹರಿಶ್ಚಂದ್ರನರಣ್ಯವ ಸೇರಿಸಿತು ಮಡದ್ಯಾಗಿ ಕಾಡಿತೊ ಕರಿಬಂಟಗೆ ದುಮ್ದದೀಶ್ವರನ ಸುಡುಗಾಡ ಸೇರಿಸಿತು ಇನ್ನು ವಿಧಿಯನು ನೋಡು ನರರ ಪಾಡೇನು || ವಿಧಿ ಕಾಡೋ ಕಾಲಕ್ಕೆ ಇಲ್ಲದಪವಾದ ಬಂತು ಕಲಿಸಿತೋ ಸುಳ್ಳು ಕಳವು ಹಾದರವ ವಿಧಿಯೊಳಗಾಗದಾ ನರರು ಮತ್ತಿಲ್ಲ ವಿಧಿ ಗೆದ್ದನೊ ಪುರಂದರಾವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು