ಜಾಣ ನೀನಹುದೊ (ಪ್ರಾಣದೇವರ ಸ್ತೋತ್ರ)

ಜಾಣ ನೀನಹುದೊ (ಪ್ರಾಣದೇವರ ಸ್ತೋತ್ರ)

(ರಾಗ ನಾದನಾಮಕ್ರಿಯೆ ಆದಿತಾಳ) ಜಾಣ ನೀನಹುದೊ , ಗುರುಮುಖ್ಯಪ್ರಾಣ ನೀನಹುದೊ ||ಪ|| ಭಾರತಿರಮಣ ನಿನಗೆಣೆಕಾಣೆ ಮೂರು ಲೋಕದಲ್ಲಿದ್ದಂಥ ಸಕಲ ಪ್ರಾಣದಲಿದ್ದಂಥ ಪಂಚಪ್ರಾಣಗಳಿಗೆ ಪ್ರಾಣನಾಥ ||ಅ|| ಕೊಟ್ಟ ರಾಮಮುದ್ರಿಕೆಯ ಬೆಟ್ಟದಲ್ಲಿ ಸಾಗರ ದಾಟಿ ಸೀತೆಮುಂದಿಟ್ಟು ಕರಗಳ ಕಟ್ಟಿಕೊಂಡ ವೀರಹನುಮ || ಕುಂತಿಸುತ ನೀನಹುದೊ , ಅಸುರರಿಗೆ ಹಂತಕಾರಿ ನೀನಹುದೊ ಚಿಂತಿತ ನಮಚರಿತಸಂಗ ಚಿಂತಿಸುವ ಸಜ್ಜನರ ಅಂತರಂಗವಾದ ನಮ್ಮ ಹಂತಕಾರಿ ಶೂರಭೀಮ ಮುದ್ದುಮುಖದವ ನೀನಹುದೊ , ಮುಜ್ಜಗವನೆ ಸದ್ಗುಣವಂದ್ಯ ನೀನಹುದೊ , ಶುದ್ಧಮತವನೆ ನೀ - ನುದ್ದರಿಪೆನೆಂದು ವೀರ ಬದ್ಧಕಂಕಣ ತೊಟ್ಟ ಮದ್ಧ್ವಮುನಿರಾಯ ಬಲು || ಇಂದುವದನ ನೀನಹುದೊ , ಗುರುರಾಯ ಆ ನಂದತೀರ್ಥ ನೀನಹುದೊ , ನೊಂದು ಬಂದ ಜನರು ವಂದಿಸೆ ನಿಮ್ಮ ಚರಣಕಮಲ ನಂಬಿದಂಥ ಭಕ್ತರನ್ನು ಕುಂದದೆ ಪೊರೆಯುವಿರಂತೆ || ಶೂರ ನೀನಹುದೊ ವಾಯುಕುಮಾರ ನೀನಹುದೊ ಪರಮನನ್ನ ನಂಬಿ ಬಲು , ಪರಮ ಮಹಿಮನೆ ನಮ್ಮ ಪುರಂದರವಿಠಲನ ಸೇವಿಸಿದ ಕೀರ್ತಿ ಪಡೆದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು