ಗತಿಯಾವುದೆನಗೆ ಶ್ರೀಪತಿಯೆ ಪೇಳೊ

ಗತಿಯಾವುದೆನಗೆ ಶ್ರೀಪತಿಯೆ ಪೇಳೊ

----- ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ ಗತಿಯಾವುದೆನಗೆ ಶ್ರೀಪತಿಯೆ ಪೇಳೊ ||ಪ|| ಮತಿಗೆಟ್ಟು ಪ್ರತಿದಿನದಿ ಸತಿಯ ಬಯಸುವೆನೊ ||ಅ.ಪ|| ಮರುಳುಬುದ್ಧಿಗಳಿಂದ ಕರಸೂಚನೆಯ ಮಾಡಿ ತರಳೆಯರ ತಕ್ಕೈಸಿ ಸರಸವಾಡಿ ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ||೧|| ನಾಚಿಕೆಯ ತೊರೆದು ಬಲು ನೀಚರಲ್ಲಿಗೆ ಪೋಗಿ ಯಾಚಿಸುವೆ ಸುವಿಚಾರಹೀನನಾಗಿ ಆ ಚತುರ್ದಶ ವರುಷದಾರಭ್ಯ ಈ ವಿಧದಿ ಆಚರಿಪೆನೈ ಸವ್ಯಸಾಚಿಸಖ ಕೃಷ್ಣ ||೨|| ನಾನು ನನ್ನದು ಎಂಬ ಹೀನಬುದ್ಧಿಗಳಿಂದ ಜ್ಞಾನಶೂನ್ಯನು ಆದೆ ದೀನಬಂಧು ಸಾನುರಾಗದಿ ಒಲಿದು ನಾನಾಪ್ರಕಾರದಲಿ ನೀನು ಪಾಲಿಸು ಹರಿಯೆ ಜ್ಞಾನಗುಣಪರಿಪೂರ್ಣ ||೩|| ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ- ದಾಂಭುಜಕ್ಕೆರಗದಲೆ ಸಂಭ್ರಮದಲಿ ತಂಬೂರಿಯನು ಪಿಡಿದು ಡಂಭತನದಲಿ ನಾನು ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ || ಪರಮೇಷ್ಟಿಯಾರಭ್ಯ ತೃಣಜೀವ ಪರಿಯಂತ ತರತಮಂಗಳ ತಿಳುಹಿ ತರುವಾಯದಲ್ಲಿ ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು ಸಿರಿಜಗನ್ನಾಥವಿಠಲ ನಿರುತ ನೀ ಪೊರೆಯದಿರೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು