ಕೊಡುವ ಕರ್ತು ಬೇರೆ ಇರುತಿರೆ

ಕೊಡುವ ಕರ್ತು ಬೇರೆ ಇರುತಿರೆ

(ರಾಗ ಸುರುಟಿ ಅಟತಾಳ ) ಕೊಡುವ ಕರ್ತು ಬೇರೆ ಇರುತಿರೆ ಬಿಡು ಬಿಡು ಚಿಂತೆಯನು ||ಪ|| ಒಡೆಯನಾಗಿ ಮೂರ್ಜಗವನು ಪಾಲಿಪ ಬಡವರುದ್ಧಾರಕ ಭಕ್ತರೊಡೆಯ ಹರಿ ||ಅ.ಪ|| ಕಲ್ಲಿನೊಳಗೆ ಇರುವ ಕಪ್ಪೆಗೆ ಅಲ್ಲಿ ಉದಕ ಕೊಡುವ ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ ವಲ್ಲಭ ಶ್ರೀಹರಿ ಎಲ್ಲೆಲ್ಲಿರುತಿರೆ || ಆನೆಗೈದು ಮಣದ ಆಹಾರವ ತಾನೆ ತಂದು ಕೊಡುವ ದೀನರೊಡೆಯ ಶ್ರೀನಿವಾಸ ದಯಾನಿಧಿ ಮಾನದಿಂದಲಿ ಕಾಯ್ವ ಭಾನುಕೋಟಿತೇಜ || ಸರಸಿಜಾಕ್ಷ ತನ್ನ ಸೇರಿದ ನರರ ಬಿಡನು ಘನ್ನ ಪರಮದಯಾನಿಧಿ ಭಕುತರ ಸಲಹುವ ಪುರಂದರವಿಟ್ಠಲ ಪುಷ್ಪಶರನ ಪಿತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು