ಕೊಟ್ಟು ಹೋಗೆನ್ನ ಸಾಲವ

ಕೊಟ್ಟು ಹೋಗೆನ್ನ ಸಾಲವ

(ರಾಗ ಶಂಕರಾಭರಣ ಅಟತಾಳ) ಕೊಟ್ಟು ಹೋಗೆನ್ನ ಸಾಲವ , ಕಣ್ಣ ಬಿಟ್ಟರಂಜುವನಲ್ಲ ಹೊರುಕಲ್ಲ ಕೃಷ್ಣ ||ಪ|| ಕಾಲ ತೂಗಿ ಭೂಮಿ ದಾಡೆಯೊಳಿಟ್ಟರೆ ಮೇಲೆ ನೆಗೆದು ಬಾಯಿ ಬಿಟ್ಟರೆ ಏಳು ವರ್ಷದ ಬಡ್ಡಿ ಮೂಲ ಸಹಿತವಾಗಿ ತಾಳುವನಲ್ಲೇಳೋ ತಿರುಕ ಮುಂಡಾಳಿ || ಕೊರಳಗೊಯಿಕ ಪೂರ್ವ ಸಾಲವ ಕೊಡದೆ ತಿರುಗೋದು ವನವನ ಉಚಿತವೆ ಎರಡೇಳು ವರ್ಷಕ್ಕೆ ಎನಗೆ ನೀ ಸಿಕ್ಕಿದೆ ಒರಳಿಗೆ ಕಟ್ಟದೆ ಬಿಡುವೆನೆ ಕಳ್ಳ || ಬತ್ತಲೆ ನಿಂತರೂ ಬಿಡುವೆನೆ, ಬೆ ನ್ಹತ್ತಿ ನಿನಗೆ ಸದಾ ತಿರುಗುವೆ ಹತ್ತಿದ ಕುದುರೆ ಸಹಿತವಾಗಿ ಹಿಡಿತಂದು ಚಿತ್ತಕ್ಕೆ ಕಟ್ಟುವೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು