ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ

ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ

(ರಾಗ ಸೌರಾಷ್ಟ್ರ ಆದಿತಾಳ) ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ ||ಪ|| ಸೂಳೆಗಾರನಂತೆ ವೀಳ್ಯವ ಕೊಟ್ಟು ವೇಳೆವೇಳೆಗೆ ಬರಹೇಳಿದ ||ಅ|| ಪುಟ್ಟಪುಟ್ಟ ಕೈಯ ಗಟ್ಟಿ ಬೆಣ್ಣೆಯ ಮುದ್ದೆ ಎಷ್ಟು ಬೇಕೆಂದರೆ ಬಟ್ಟ ಕುಚಂಗಳ ಕೈಲಿ ಪಿಡಿದು ಇದರಷ್ಟು ಬೇಕೆಂದನೆ || ಚಿಕ್ಕವನೆಂದು ತರ್ಕಿಸಿಕೊಂಡರೆ ಪಕ್ಕಗಳೆರಡು ಬಿಟ್ಟು ಹೊಕ್ಕುಳ ಕೆಳಗೆ ಬಿಕ್ಕಿಲಿ ಗಿಲಿಪ್ಪ ಮಕ್ಕಳೆಲ್ಲಾದರುಂಟೆ || ಬಾಲಕನೆಂದು ಲಾಲಿಸಿ ಕರೆದರೆ ಲೋಲಾಡುತಲಿ ನಿಂತು ಹಾಲುತುಪ್ಪವ ಕುಡಿದು ಸೀರೆಗೆ ಒರೆಸಿ ಮೂಲೆಗೆ ಕೈ ಚಾಚಿದ || ಎಲ್ಲ ಬೆಣ್ಣೆಯ ಮೆದ್ದು ನಮಗಿಷ್ಟು ಕೊಡೆಂದರೆ ನಿಲ್ಲುನಿಲ್ಲೆಂದು ಎಲ್ಲ ಬೆಣ್ಣೆಯ ಮೆದ್ದು ಚೆನ್ನಾಗಿ ಬುಲ್ಲಿಯ ತೋರಿದ || ಉಡಿಯ ಸೀರೆಯ ಬಿಚ್ಚಿ ದಡದ ಮೇಲಿಟ್ಟು ಮಡುವಿನೊಳು ಮೈತೊಳೆಯೆ ತಡವಾಯಿತೆಂದು ಉಟ್ಟ ಸೀರೆಯ ಕೊಂಡು ಕಡಹದ ಮರನೇರಿದ || ಬತ್ತಲಾಗಿದ್ದೆವು ಹಸ್ತವ ಮುಚ್ಚಿದೆವು , ಇತ್ತ ನೀ ನೋಡದಿರೊ ಹತ್ತಿಲಿ ಬಂದು ಹಸ್ತವ ಮುಗಿದರೆ ವಸ್ತ್ರವ ಕೊಡುವೆನೆಂದ || ಗಾಡಿಗಾರ ರಂಗ ಗೋಡೆಯ ದಾಟಿ ಬಂದು ಆಡುತಲೆ ನಿಂತನೆ ಮಾಡಬಾರದ ಕೆಲಸ ಮಾಡಿ ಪುರಂದರವಿಠಲರಾಯ ಓಡಿ ಹೋದನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು