ಕೃಷ್ಣ ಎನಬಾರದೆ

ಕೃಷ್ಣ ಎನಬಾರದೆ

(ರಾಗ ಸೌರಾಷ್ಟ್ರ ಛಾಪುತಾಳ ) ಕೃಷ್ಣ ಎನಬಾರದೆ , ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ|| ನರಜನ್ಮ ಬಂದಾಗ ನಾಲಿಗೆ ಇರುವಾಗ , ಕೃಷ್ಣ ಎನಬಾರದೆ ||ಅ|| ಮಲಗಿದ್ದು ಮೈಮುರಿದು ಏಳುತಲೊಮ್ಮೆ, ಕೃಷ್ಣ ಎನಬಾರದೆ , ನಿತ್ಯ ಸುಳಿದಾಡುತ ಮನೆಯೊಳಗದರು ಒಮ್ಮೆ , ಕೃಷ್ಣ ಎನಬಾರದೆ || ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ , ಕೃಷ್ಣ ಎನಬಾರದೆ , ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ , ಕೃಷ್ಣ ಎನಬಾರದೆ || ಗಂಧವ ಪೂಸಿ ತಾಂಬೂಲ ಮೆಲುವಾಗ , ಕೃಷ್ಣ ಎನಬಾರದೆ , ತನ್ನ ಮಂದಗಮನೆ ಕೂಡ ಸರಸವಾಡುತಲೊಮ್ಮೆ , ಕೃಷ್ಣ ಎನಬಾರದೆ || ಪರಿಹಾಸ್ಯದ ಮಾತನಾಡುತಲೊಮ್ಮೆ , ಕೃಷ್ಣ ಎನಬಾರದೆ , ಪರಿಪರಿ ಕೆಲಸದೊಳೊಂದು ಕೆಲಸವೆಮ್ದು , ಕೃಷ್ಣ ಎನಬಾರದೆ || ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ , ಕೃಷ್ಣ ಎನಬಾರದೆ ಬಹು ಚೆಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ , ಕೃಷ್ಣ ಎನಬಾರದೆ || ನೀಗದಾಲೋಚನೆ ರೋಗೋಪದ್ರದಲೊಮ್ಮೆ , ಕೃಷ್ಣ ಎನಬಾರದೆ , ಒಳ್ಳೇ ಭೋಗ ಪಡೆದು ಅನುರಾಗದಿಂದಿರುವಾಗ , ಕೃಷ್ಣ ಎನಬಾರದೆ || ದುರಿತರಾಶಿಗಳನು ತರಿದು ಬಿಸುಡಲು , ಕೃಷ್ಣ ಎನಬಾರದೆ, ಸದಾ ಗರುಡವಾಹನ ಸಿರಿಪುರಂದರವಿಠಲನ್ನೇ , ಕೃಷ್ಣ ಎನಬಾರದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು