ಕಾಯಬೇಕೆನ್ನ ಗೋಪಾಲ

ಕಾಯಬೇಕೆನ್ನ ಗೋಪಾಲ

(ರಾಗ ಕಾಪಿ ಅಟತಾಳ) ಕಾಯಬೇಕೆನ್ನ ಗೋಪಾಲ , ಒಂದು- ಪಾಯವನರಿಯೆನು ಭಕ್ತರಪಾಲ ||ಪ|| ಹಲವು ಜನ್ಮಗಳೆತ್ತಿ ಬಂದೆ, ಮಾಯಾ- ಬಲವೆಂದರಿಯದೆ ಭವದೊಳು ನೊಂದೆ ಒಲಿದು ಭಯವಾಯಿತು ಮುಂದೆ , ನೀನು ಸುಲಭನೆಂದು ಕೇಳಿ ಶರಣೆಂದು ತಂದೆ || ವಿತ್ತದೊಳಗೆ ಮನವಿಟ್ಟು, ನಿನ್ನ ಉತ್ತಮನಾಮದ ಸ್ಮರಣೆಯ ಬಿಟ್ಟು - ನ್ಮತ್ತನಾಗಿ ಮತಿಗೆಟ್ಟು, ಇದು ಚಿತ್ತದೊಳಗೆ ತಿಳಿದು ಬಲು ದಯವಿಟ್ಟು || ಈ ರೀತಿ ಪಾಪಗಳೆಲ್ಲ , ಅನ್ಯ - ನರರೇನು ಅರಿವರು ಯಮಧರ್ಮ ಬಲ್ಲ ನರಕಕ್ಕೆ ಒಳಗಾದೆನಲ್ಲ , ಸಿರಿ- ವರ ನಾರಾಯಣ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು