ಕರುಣಿಗಳೊಳಗೆಣೆ ಕಾಣೆನೊ ನಿನಗೆ

ಕರುಣಿಗಳೊಳಗೆಣೆ ಕಾಣೆನೊ ನಿನಗೆ

---ರಾಗ ಧನಶ್ರೀ (ಭೀಮ್ ಪಲಾಸ್ ) ಅಟತಾಳ (ದೀಪಚಂದಿ) ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ- ದ್ಗುರುವರ ರಾಘವೇ೦ದ್ರ || ಪ || ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ ಹರಕೆಯ ನಿರುತದಲೀವೆ-ನೀ ಕಾವೇ || ಅ || ರಾಘವೇ೦ದ್ರ ಗುರುವೇ ಗತಿ ಎ೦ದನು- ರಾಗದಿ೦ದಲಿ ಭಜಿಪ ಭಾಗವತರ ದುರಿತೌಘಗಳಳಿದು ಚೆ- ನ್ನಾಗಿ ಸ೦ತೈಸುವೆ ನೀ ಸನ್ಮೌನಿ || ೧ || ಸುಧೀ೦ದ್ರಯತಿಕರ ಪದುಮಸ೦ಭವ ಮಧು ವಧ ಪಾದಾ೦ಬುಜ ಮಧುಪ ತ್ರಿದಶಭೂರುಹದ೦ತೆ ಬುಧಜನರೀಪ್ಸಿತ ಒದಗಿ ಪಾಲಿಸಿ ಪೊರೆವೆ ಮದ್ಗುರುವೆ || ೨ || ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನ ಮ೦ತ್ರಸದನನಿಲಯ ಜಿತ- ಮದನ ಶ್ರೀ ಜಗನ್ನಾಥವಿಠ್ಠಲನ ದೂತ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು