ಕಂಡು ಮನ ಹಿಗ್ಗಿತು ರಂಗಯ್ಯನ

ಕಂಡು ಮನ ಹಿಗ್ಗಿತು ರಂಗಯ್ಯನ

(ರಾಗ ಶಂಕರಾಭರಣ , ಛಾಪುತಾಳ) ಕಂಡು ಮನ ಹಿಗ್ಗಿತು ರಂಗಯ್ಯನ ,ಕಾಣದೆ ಮನ ನಿಲ್ಲದು ||ಪ|| ಮಲ್ಲಮಲ್ಲರ ಗೆಲಿದ ರಂಗಯ್ಯ , ಮಲ್ಲಗಂಟನೆ ಬಿಗಿದ ಬಿಲ್ಲಹಬ್ಬಕೆ ಬಂದು ಮಾವ ಕಂಸನ ಕೊಂದ || ಕತ್ತಲೆಯನು ಸುತ್ತಿರೆ ರಂಗಯ್ಯ ಕಸ್ತೂರಿ ತಿಲಕನಿಟ್ಟು ಚಿತ್ರಮೂರುತಿ ಚಿನ್ನ ಕೊಳಲನೂದುತ ಬಂದ || ಹೇಮಕರ ಡೊಂಕನೆ ರಂಗಯ್ಯ ಅಮಿತಫಲದಾತನೆ ಕಾಮಿತಫಲವೀವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು