ಏನಾಯಿತೋ ಈ ಜನಕೆ

ಏನಾಯಿತೋ ಈ ಜನಕೆ

( ರಾಗ ಬಿಲಹರಿ. ಅಟ ತಾಳ) ಏನಾಯಿತೋ ಈ ಜನಕೆ ಮೌನವನು ಹಿಡಿದು ಮರೆತರು ಹರಿಯ ||ಪ|| ನಾಲಿಗೆ ಮುರಿದಿತೊ ನೆಗ್ಗಿಲ ಕೊನೆಮುಳ್ಳು ಬಾಲಕತನದಲಿ ಭೂತ ಹಿಡಿಯಿತೊ ಮೇಲೆ ಕೆಳಗಿನ ತುಟಿ ಎರಡು ಒಂದಾಯಿತೊ ಕಾಲ ಮೃತ್ಯುವು ಬಂದು ಕಂಗೆಡಿಸಿತೊ || ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೋ ಕಟಕರಿಸಿ ನಾಲಿಗೆ ಕಡಿದ್ಹೋಯಿತೋ ಹಟದಲ್ಲಿ ಹರಿಯನ್ನು ನೆನೆಯದೆ ಇರುವಂಥ ಕುಟಿಲ ಚಂಚಲ ಮನಸು ಕೂಡಿ ಬಾಧಿಸಿತೊ || ಹರಿಯೆಂದರಿವರ ಶಿರ ಹರಿದು ತಾ ಬೀಳುವುದೆ ಹರಿನಾಮ ಹಣೆಯಲ್ಲಿ ಬರೆದಿಲ್ಲವೆ ವರದ ಪುರಂದರವಿಠಲರಾಯನ್ನ ಸ್ಮರಿಸಿದರೆ ಸಿಡಿಲೆರಗಿ ಕೊಲ್ಲುವುದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು