ಏಕೆ ನಿರ್ದಯನಾಗುವೆ

ಏಕೆ ನಿರ್ದಯನಾಗುವೆ

( ರಾಗ ಕಲ್ಯಾಣಿ. ಅಟ ತಾಳ) ಏಕೆ ನಿರ್ದಯನಾಗುವೆ, ರಂಗಯ್ಯ ರಂಗ ಏಕೆ ನಿರ್ದಯನಾಗುವೆ ||ಪ|| ಏಕೆ ನಿರ್ದಯ ರಂಗ, ಕಾರುಣ್ಯಪತಿಯೆನ್ನ ಸಾಕುವುದು ನಿನ್ನ ಭಾರ ಪಾಕಶಾಸನವಂದ್ಯ ||ಅ|| ಅರಿತು ಪಾಡುವೆನೆಂದರೆ, ರಂಗಯ್ಯ ನಿನ್ನ ಅರಿತವರಾರಯ್ಯ ಅರಿಯಬಾರದ ನಿನ್ನ ಹೊಂದುವುದ್ಹ್ಯಾಂಗಯ್ಯ ಅರಿಯದವನು ನಾನು, ದಾರಿ ತೋರಿಸೋ ನೀನು || ಸುಲಭನು ನೀನೆಂದು ನಿನ್ನ ಬಳಿಗೆ ಬಳಲಿ ಬಂದೆನೊ ದೊರೆಯೆ ಸುಲಭ ನೀನಾದರೆ ಒಲಿದು ಸಲಹಬೇಕೊ ಚೆಲುವ ಮೂರುತಿ ಕೃಷ್ಣ ಎನ್ನ ಬಿಟ್ಟಗಲದೆ || ಎಷ್ಟು ದಿವಸ ಹರಿಯೆ , ಈ ಮುಚ್ಚಾಟ ಕಷ್ಟಪಡಿಸಬೇಡವೊ ಎಷ್ಟಿದ್ದರು ನಾ ಮಾಡಿದಪರಾಧ ಅಷ್ಟು ಮರೆತು ಎನ್ನ ಇಷ್ಟದೆ ಕೈ ಪಿಡಿಯೊ || ಮಾತು ಮಾತಿಗೆ ನಿನ್ನ ನಾಮಗಳನ್ನು ಹೇ ತಾತ ನುಡಿದೆನಲ್ಲದೆ ನೀತಿಯ ಪೇಳಯ್ಯ ವಾತಜನಯ್ಯನೆ ದೂತನು ನಾನಯ್ಯ ದೂರ ಮಾಡದೆ ಕಂಡ್ಯ || ನಂಬಿಕೆ ಇಲ್ಲದಂಥ ಡಿಂಭವ ಪಡೆದೆ ಡಂಭಕ ಬೊಂಬೆಯಾದೆ ಡಂಭತನವ ಬಿಡಿಸೊ ನಿನ್ನಂಘ್ರಿಯ ತೋರಿಸೊ ಅಂಬುಜಾಕ್ಷ ತಂದೆ ಪುರಂದರವಿಠಲನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು