ಎಲ್ಲಿ ಶ್ರೀ ತುಲಸಿಯ ವನವು

ಎಲ್ಲಿ ಶ್ರೀ ತುಲಸಿಯ ವನವು

( ರಾಗ ಭೂಪಾಳಿ. ಅಟ ತಾಳ) ಎಲ್ಲಿ ಶ್ರೀ ತುಲಸಿಯ ವನವು ಅಲ್ಲಿ ಒಪ್ಪುವರು ಸಿರಿನಾರಾಯಣರು || ಪ || ಗಂಗೆ ಯಮುನೆ ಗೋದಾವರಿ ಕಾವೇರಿ ಕಂಗೊಳಿಸುವ ಮಣಿಕರ್ಣಿಕೆಯು ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ ಮುಂಗಾಡಿಸುವ ಮೂಲ ವೃಕ್ಷದಲಿರುವರು || ಸರಸಿಜಭವ ಭವ ಸುರಪ ಪಾವಕ ಚಂ- ದಿರ ಸೂರ್ಯ ಮೊದಲಾದವರು ಸಿರಿರಮಣನ ಆಜ್ಞದಿ ಅಗಲದಂತೆ ತರುಮಧ್ಯದೊಳು ನಿತ್ಯ ನೆಲಿಸಿಪ್ಪರು || ಋಗ್ವೇದ ಯಜುರ್ವೇದ ಸಾಮ ಅಥರ್ವಣ ಅಘಹಳಿಸುವ ವೇದಘೋಷಗಳು ಅಗ್ರ ಭಾಗದಲ್ಲಿದೆ ಬೆಟ್ಟದೊಡೆಯ ಅಲ್ಲಿ ಶೀಘ್ರದಿ ಒಲಿವ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು