ಎನ್ನ ಮನದ ಡೊಂಕ ತಿದ್ದಿಸೊ

ಎನ್ನ ಮನದ ಡೊಂಕ ತಿದ್ದಿಸೊ

(ರಾಗ ಪಂತುವರಾಳಿ ಅಟತಾಳ) ಎನ್ನ ಮನದ ಡೊಂಕ ತಿದ್ದಿಸೋ, ಶ್ರೀನಿವಾಸ ಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿ ನಿನ್ನ ಸೇವಕನಾದ ಮೇಲೆ ಇನ್ನು ಸಂಶಯವೇಕೆ ಕೃಷ್ಣ ನಿನ್ನ ಚರಣದಲ್ಲಿ ಸೇರಿಸೋ ||ಅ.ಪ|| ಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ ಹದಿನಾಲ್ಕು ಲೋಕವಾಳಬೇಕೆಂಬ ಚಿಂತೆ ಇದು ಪುಣ್ಯ ಇದು ಪಾಪವೆಂದು ಹೃದಯದಲಿ ಭಯವಿಲ್ಲದೆ ಮದನೋಹಿತನಾದೆ ನಿನ್ನ ಪದವ ನಂಬದೆ ದೀನದಯಾಳೋ || ನೆರೆಮನೆಯ ಭಾಗ್ಯ ನೋಡಿ ಸಹಿಸಲಾರದೆ ಅಸೂಯನಾಗಿ ಹರಿಸ್ಮರಣೆಗೆ ವಿಮುಖನಾದೆ ನರರ ಸ್ತುತಿಯ ಮಾಡಿದೆ ಪರರ ಸತಿಗೆ ಪರ ಅನ್ನಕ್ಕೆ ತಿರುಗಿ ತಿರುಗಿ ಚಪಲನಾದೆ ಗುರುಹಿರಿಯರ ದೂಷಿಣಿ ಮರುಳಾದೆ ದೀನಶರಣ್ಯ || ಅಗಣಿತ ಸುಖ ಬಂದರೆ ನಾ ಅಗಣಿತ ದುಃಖಕ್ಹರಿಯೆಂಬುವೆ ಜಗದೊಳು ಲಾಭವು ಬಂದರೆ ಧನಿಕ ನಾನೆಂಬೆ ಮಿಗೆ ಹಾನಿಗೆ ಹರಿ ದೂಷಿಸಿ ನೆಗೆದು ಪತಂಗ ಕಿಚ್ಚಿಲಿ ಬೀಳ್ವ ಬಗೆಯಾದೆನು ಪುರಂದರ ವಿಠಲ ಖಗರಾಜ ಸುವಾಹನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು