ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ

ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ

( ರಾಗ - ಸೌರಾಷ್ಟ್ರ ಅಷ್ಟತಾಳ) ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ, ನಿಶ್ಚಯವೆಚ್ಚರಿಕೆ ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆ ಮೆಚ್ಚು ಕೇಳೆಚ್ಚರಿಕೆ ||ಪ|| ದೊರೆಗಳೊಲುಮೆ ಉಂಟೆಂದು ಎಲ್ಲರೊಳು ಹಗೆ ತರವಲ್ಲ, ಎಚ್ಚರಿಕೆ ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ನಡೆಯುವುದು, ಎಚ್ಚರಿಕೆ ||೧|| ಸಿರಿಯೆಂಬ ಸೊಡರಿಗೆ ಮಾನದ ಅಭಿಮಾನ ಬಿರುಗಾಳಿ, ಎಚ್ಚರಿಕೆ ಧರೆಯೊಳಗೆ ಸುಸ್ಥಿರವೆಂದು ಗರ್ವದೊಳು ನಡೆಯದಿರು ಎಚ್ಚರಿಕೆ ||೨|| ಕೊಡವ ಅಂಧಕ ಹೊತ್ತು ನಡೆವಧಿಕಾರದಿ ನೆರೆ ತಪ್ಪುದೆಚ್ಚರಿಕೆ ಬಡವರೆಡರ ಕೇಳದೆ ಮುಂದಕೆ ಹೆಜ್ಜೆ ಇಡಬೇಡ , ಎಚ್ಚರಿಕೆ ||೩|| ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ , ಕೇಳೆಚ್ಚರಿಕೆ ನಾಕೇಶನಾದರು ಬಿಡದಪವಾದ ಪರಾಕು , ಕೇಳೆಚ್ಚರಿಕೆ||೪|| ಕಾಕು ಮನುಜರ ಚಾಡಿಯ ಕೇಳಿ ಕೋಪೋದ್ರೇಕ ಬೇಡೆಚ್ಚರಿಕೆ ಭೂಕಾಂತೆ ನಡುಗುವಳು ನಿಷ್ಠುರದ ವಾಕು ಬೇಡೆಚ್ಚರಿಕೆ ||೫|| ನಳಮಾಂಧಾತರೇನಾದರೆಂಬುದ ನೀ ತಿಳಿದು ನೋಡೆಚ್ಚರಿಕೆ ಅಳಿವುದು ಕಾಯವು, ಉಳಿವುದಲ್ಲದೆ ಕೀರ್ತಿ ಇಳೆಯೊಳೆಚ್ಚರಿಕೆ ||೬|| ಅಳಲಿಸಿ ಪರರನು ಗಳಿಸಿದ ಹೊನ್ನು ಉಳಿಯದು , ಎಚ್ಚರಿಕೆ ಉಳಿದಲ್ಪಕಾಲಕೆ ಬಡವರಾದವರನ್ನು ಹಳಿಯದಿರೆಚ್ಚರಿಕೆ ||೭|| ಪರಧನ ಪರಪತ್ನಿಗಳಿಗಳುಕಲು ಸಿರಿಮೊಗ ತಿರುಗುವಳೆಚ್ಚರಿಕೆ ಬರುವ ಹಾನಿ ವೃದ್ಧಿ ತನ್ನ ಕಾಲ ಮೀರಲರಿಯದು ಎಚ್ಚರಿಕೆ ||೮|| ಬಲ್ಲಿದ ನೀನೆಂದು ಬಡವರ ಬಾಯನ್ನು ಹೊಯ್ಯಬೇಡೆಚ್ಚರಿಕೆ ಎಳ್ಳಷ್ಟು ತಪ್ಪಲು ಯಮನವರು ನರಕಕ್ಕೆ ಎಳೆದೊಯ್ವರೆಚ್ಚರಿಕೆ ||೯|| ವರಛಿದ್ರ ಕುಂಭದ ಉದಕದಂತಾಯುಷ್ಯ ಸರಿಯಪ್ಪುದೆಚ್ಚರಿಕೆ ವರದ ಪುರಂದರ ವಿಠ್ಠಲನ ಸ್ಮರಣೆಯ ಮರೆಯಬೇಡೆಚ್ಚರಿಕೆ ||೧೦||
ದಾಸ ಸಾಹಿತ್ಯ ಪ್ರಕಾರ
ಬರೆದವರು