ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ

ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ

( ರಾಗ ಪಂತುವರಾಳಿ/ಕಾಮವರ್ಧಿನಿ. ತ್ರಿಪುಟ ತಾಳ) ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ ||ಪ|| ಎಂದು ನಿನ್ನಯ ಕೃಪೆ ಬಾಹೋದಚ್ಯುತನೆ ||ಅ|| ಫಲವೃಕ್ಷಬಳ್ಳಿಗಳ ಮಲದಲಿಪ್ಪತ್ತು ಲಕ್ಷ ಜಲದೊಳಗೆ ಒಂಬತ್ತು ಲಕ್ಷ ಜೀವಿಸಿ ಅಳಲಿದೆ ಏಕಾದಶ ಲಕ್ಷ ಕ್ರಿಮಿಯಾಗಿ ಬಳಲಿದೆ ಅಂಡಜಾಲಂಗಳಲಿ ದಶಲಕ್ಷ || ನರನಾಗಿ ನಾಲ್ಕು ಲಕ್ಷ ಜನ್ಮ ಜನಿಸಿ ಪರಿಪರಿ ಭವಣೆಗಳನನುಭವಿಸಿದೆನೊ ಸರಸಿಜಾಕ್ಷನೆ ನಿನ್ನ ಭಜನೆ ಮಾಡದೆ ದೇವ ಸರಸಿಜ ಸಂಭವನ ಶತಕಲ್ಪದಲಿ || ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ ಬಿದ್ದು ಕುಂಭಿನಿಯಲಿ ಬಂದು ನೊಂದೆನೊ ಸ್ವಾಮಿ ಅಂಬುಜಾಕ್ಷ ಆಲದೆಲೆಯಲ್ಲಿ ಮಲಗಿದ ಕಂಬುಗ್ರೀವ ಚಕ್ರಧರ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು