ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು

ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು

ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು | ಆಯಸ್ಸು ಎಂಬೊ ರಾಸಿ ಅಳೆದು ಹೋಗದ ಮುನ್ನ | ಹರಿಯ ಭಜಿಸಬೇಕು, ಮನಮುಟ್ಟಿ ಭಜಿಸಿದರೆ | ತನಕಾರ್ಯವು ಘಟ್ಟಿ || ಹಾಗಲ್ಲದಿದ್ದರೆ ತಾಪತ್ರಯ ಬೆನ್ನಟ್ಟಿ ವಿಧಿಯೊಳು ಗೆಯ್ವಾಗ ಹೋಗದಯ್ಯ ಕಟ್ಟಿ ಪುರಂದರವಿಠಲನ ಕರುಣಾ ದೃಷ್ಟಿ ಅವನ ಮೇಲಿದ್ದರೆ ಅವ ಜಗಜಟ್ಟಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು