ಆದಿ ವರಾಹನ ಚೆಲುವ ಪಾದವ ಕಾಣದೆ

ಆದಿ ವರಾಹನ ಚೆಲುವ ಪಾದವ ಕಾಣದೆ

( ರಾಗ ಕಾಂಭೋಜ ಆದಿ ತಾಳ) ಆದಿ ವರಾಹನ ಚೆಲುವ ಪಾದವ ಕಾಣದೆ ಕಣ್ಣು ವೇದನೆಯಾಗಿವಳ ಬಾಧಿಸುತಲಿದೆ ಎನ್ನ ||ಪ|| ಈ ಧರಣಿ ಮುಳುಗೆ ಶುಕ್ಲ ನದಿಯ ದಕ್ಷಿಣದಲ್ಲಿದ್ದ ಮೇದಿನಿ ಕೋರೆದಾಡೆಲೆತ್ತಿದಂಥ ||ಅ|| ಅಷ್ತ ಸ್ವಯಂವ್ಯಕ್ತ ಶ್ರೀಮುಷ್ಟ ಅಷ್ಟಾಕ್ಷರ ಮಂತ್ರವನ್ನು ಇಷ್ಟು ಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದರೊ ನಷ್ಟ ಬಾರದಂತೆ ಮನದಿಷ್ಟರ್ಥವ ಕೊಟ್ಟು ಕಾಯ್ವ ನಮ್ಮ ಅಷ್ಟ ದಿಕ್ಕಿಗೆ ಒಡೆಯವನೊಬ್ಬ || ನಿತ್ಯ ಪುಷ್ಕರಿಣಿ ಸುತ್ತು ಹದಿನಾರು ತೀರ್ಥ ನಿತ್ಯ ಸೇವೆಯಾಗಿರುವ ಪ್ರತ್ಯೇಕ ಅಶ್ವಥವಿರಲು ಅರ್ಥಿ ನೋಡ ಬಂದಾರೆಂದು ಶ್ರುತ್ಯರ್ಥ ಕೊಂಡಾಡುತಿರೆ ಅತ್ಯಂತ ಅಕ್ಕರೆಯಿಂದಲಿ || ಸತ್ಯ ಲೋಕದ ಬ್ರಹ್ಮನು ಭೃತ್ಯರನ್ನು ಕೂಡಿಕೊಂಡು ವಿಸ್ತಾರದಿ ನಿಂತು ಕೈಯನೆತ್ತಿ ಮುಗಿವರೆಂತೆಂದು ರತ್ನದ ಭೂಷಣಗಳು ಮುತ್ತಿನೋಲೆ ಮೂಗುತಿಯು ಮುತ್ತೈದೆ ಅಂಬುಜವಲ್ಲಿಗೆ ಕೊಟ್ಟ || ಅಲ್ಲಲ್ಲಿ ಪುಣ್ಯ ತೀರ್ಥವು ಅಲ್ಲಲ್ಲಿ ಸ್ನಾನ ದಾನವು ಅಲ್ಲಲ್ಲಿ ಜಪ ತಪವು ಅಲ್ಲಲ್ಲಿ ದೇವತಾರ್ಚನೆ ಅಲ್ಲಲ್ಲಿ ಗಂಧರ್ವರ ಗಾನ ಅಲ್ಲಲ್ಲಿ ಮಧ್ವಮತಸ್ತೋಮ ಅಲ್ಲಲ್ಲಿ ನಂದನವನ ಅಲ್ಲಲ್ಲಿ ಮಲ್ಲಿಗೆ ಹೂವಿನ ವನ ಅಲ್ಲಿ ವರಾಹ ಅಂಬುಜವಲ್ಲಿಯು ಝಲ್ಲಿಕಾ ವನದಲ್ಲಿದ್ದರು || ದಂಡಕಾರಣ್ಯಭೂಮಿಲಿ ತೊಂಡಮಂಡಲದೊಳಗೆ ಹಿಂಡು ಹಿಂಡು ಅಟ್ಟಡಿಂದ ದಂಡಕಾಸುರಪಡೆಯ ಖಂಡಿಸಿ ದೈತ್ಯರನೆಲ್ಲ ತುಂಡು ತುಂಡು ಮಾಡಿದನು- ದ್ದಂಡ ಶ್ವೇತವರಾಹನು || ಕಂಡು ಭಜಿಸಿರೊ ಗಜಗಂಡು ಸುಯಜ್ಞಮೂರುತಿ ಕೊಂಡಾಡಿದ ಭಜಕರ ಮಂಡೆ ಪೂ ಬಾಡದೆಂದೆಂದು ಪುಂಡರೀಕ ಸ್ವಾಮಿ ತಾನು ಉಂಡು ಮಿಕ್ಕ ಪ್ರಸಾದವ ಪ್ರ- ಚಂಡ ಹನುಮಂತಗೆ ಕೊಟ್ಟ || ಭಾರವು ಹಾರುವೊ ವೇಳೆ ಗರುಡೋತ್ತಮನು ಬಂದು ಬೇಗ ಗುರುಮಂತ್ರ ಉಪದೇಶ ಹರಿಸ್ಮರಣೆಯಿಂದಲಿ ನರಬಾಧೆಗಳು ಬಾರದೆಂದು ಶ್ರೀ- ಹರಿಪಾದ ತಿರುಪತಿ ಉತ್ತರ ಶೇಷವರದ ಪುರಂದರ ವಿಠಲನ ಚರಣ ಕಮಲದಲಿ ಓಲಾಡಿದಿಯೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು