ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ

ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ

( ಕೇದಾರಗೌಳ ರಾಗ ಅಷ್ಟತಾಳ) ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ ಹೋಗಿ ನೋಡಿ ಬರುವುದಕೆ ||ಪ|| ಹೋಗುವ ಎಂದೆಂಬ ಮಾತು ನಿಶ್ಚಯವಾಗಿ ಬೇಗದ ಪಯಣದಲಿ ನಾಗಗಿರೀಶನ ಕಂಡು ಕಾಣಿಕೆಯಿತ್ತು ಸಾಗಿ ಬರುವ ಊರಿಗೆ ಇವರಿಗೆ ||ಅ|| ಕೋನೇರಿವಾಸನ ನಾ ಹೋಗಿ ನೋಡಲು ಮಾನವ ಜನುಮದಲಿ ಹೀನ ವೃತ್ತಿಯ ಬಿಟ್ಟು ಜ್ಞಾನಬುತ್ತಿಯ ಕಟ್ಟಿ ಕಾಣಲು ಇಹಪರವಾತ ತಾನೆರೆವ ||೨|| ರಾಮನ ಶಿಕ್ಷೆಯು ರಾಮನ ರಕ್ಷೆಯು ರಾಮನ ನಿಜಮತವು ರಾಮ ಆಂಜನೇಯನ ಗಿರಿಯೊಳು ನಿಂತಿಪ್ಪ ಭೂಮಿ ವರಾಹ ತಿಮ್ಮಪ್ಪ ||೩|| -- ರಚನೆ :-ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು