ಅಂದು ಗೋಕುಲದಲ್ಲಿ ಗೋಪಾಲಕರಾಗಿ

ಅಂದು ಗೋಕುಲದಲ್ಲಿ ಗೋಪಾಲಕರಾಗಿ

ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು ಅಂದು ಗೋವುಗಳಾಗಿ ಸಾಧನವ ಮಾಡಿ ಸಾಮೀಪ್ಯವನ್ನು ಪಡೆದರು ಕೆಲರು ಅಂದು ನಿನ್ನನು ಕೂಡಿ ಆಡಿ ಸಾರೂಪ್ಯವೆಂಬ ಮುಕ್ತಿಯ ಪಡೆದರು ತತ್ವಾಭಿಮಾನಿಗಳು ಒಂದೊಂದು ಅವಯವದಲ್ಲಿ ಸಾಯುಜ್ಯವೆಂಬ ಮುಕುತಿಯ ಪಡೆದರು ಕೆಲವರು ಆಗ ಸಾಯುಜ್ಯ ಸರ್ವಾಂಗದಲಿ ಅಜಗಿತ್ತು ಸಲಹಿದೆ ಅನುಪಮ ಗುಣನಿಲಯ ಗುರುಪುರಂದರವಿಠಲ ಮುಖ್ಯಪ್ರಧಾನನಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು