ಅಂತರಂಗದ ಕದವು ತೆರೆಯಿತಿಂದು

ಅಂತರಂಗದ ಕದವು ತೆರೆಯಿತಿಂದು

ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇಂದಿನ ತನಕ ತಮಸಿನ ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧|| ಹರಿಕರುಣವೆಂಬ ಕೀಲಿಕೈ ದೊರಕಿತು ಗುರುಕರುಣವೆಂಬಂಥ ಶಕ್ತಿಯಿಂದ ಪರಮಭಾಗವತರ ಸಹವಾಸದಲಿ ಪೋಗಿ ಹರಿಸ್ಮರಣೆಯಿಂದಲ್ಲಿ ಬೀಗವ ತೆಗೆದೆ ||೨|| ಸುತ್ತಲಿದ್ದವರು ಪಲಾಯನವಾದರು ಭಕ್ತಿಕಕ್ಕಡವೆಂಬ ಜ್ಞಾನದೀಪ ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ ಎತ್ತನೋಡಿದರತ್ತ ಶೃಂಗಾರಸದನ ||೩|| ಹೊರಗೆ ದ್ವಾರವು ನಾಲ್ಕು , ಒಳಗೈದು ದ್ವಾರಗಳು ಪರ ದಾರಿಗೆ ಪ್ರಾಣ ಜಯವಿಜಯರು ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ ಸರಸಿಜನಾಭನ ಅರಮನೆಯ ಸೊಬಗು ||೪|| ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದ ರಮೆಧರೆಯರಿಂದಲಾಲಿಂಗತ್ವದಿ ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು