ಅಂಜಲೇತಕೆ ಮನವೆ

ಅಂಜಲೇತಕೆ ಮನವೆ

(ರಾಗ ಮುಖಾರಿ ಝಂಪೆ ತಾಳ) ಅಂಜಲೇತಕೆ ಮನವೆ ಅನುಗಾಲವು ಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ|| ನಾರಾಯಣವೆಂಬೊ ನಾಲ್ಕು ಅಕ್ಷರದಿಂದ ಘೋರ ದುರಿತಗಳೆಲ್ಲ ಕಳೆಯಬಹುದು ಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡು ವೈರಿಷಡ್ವರ್ಗಗಳ ವಧೆ ಮಾಡಬಹುದು ಶ್ರೀಕೇಶವನೆಂಬೊ ಸಿದ್ಧಿಮಂತ್ರಗಳಿಂದ ಬೇಕಾದ ಕರ್ಮಗಳ ಕಳೆಯಬಹುದು ವೈಕುಂಠಪತಿಯೆಂಬ ವಜ್ರವನು ತಕ್ಕೊಂಡು ನೂಕುವ ಯಮಭಟರ ನುಗ್ಗು ಮಾಡಬಹುದು ಹರಿವಾಸುದೇವನೆಂಬೊ ಅಮೃತಪಾನಗಳಿಂದ ಜರೆಮರಣಜನನಗಳ ಜಯಿಸಬಹುದು ವರದ ಪುರಂದರ ವಿಠಲನ ಸ್ಮರಣೆಯನು ಸರಸ ಸದ್ಭಕ್ತಿಯಿಂದ ಸವಿಮಾಡಬಹುದು
ದಾಸ ಸಾಹಿತ್ಯ ಪ್ರಕಾರ
ಬರೆದವರು