ಮಹೀಪತಿದಾಸರು

ದೇವ ಬಂದ ದೇವಕಿ ಕಂದ

(ರಾಗ ಮಿಶ್ರಪೀಲೂ , ತ್ರಿತಾಳ) ದೇವ ಬಂದ ದೇವಕಿ ಕಂದ ||ಧ್ರುವ|| ದೇವ ಬಂದ ದೇವತೆಗಳ ಪ್ರಿಯ ಭುವನತ್ರಯಕಾಗಿಹ ಆಶ್ರಯ ||ಪ|| ಮಾಮನೋಹರ ಮಾಧವ ಮುರಾರಿ ಸಾಮಜವರದ ಸದಾ ಸಹಕಾರಿ ||೧|| ಉರಗಶಯನ ಹರಿ ಕರುಣಾನಂದ ಗರುಡವಾಹನ ಗೋಪಾಲ ಗೋವಿಂದ ||೨|| ಸರ್ವಾನಂದ ಶ್ರೀಹರಿ ಸಿರಿಲೋಲ ಸಾರ್ವಭೌಮ ಸದಾ ಕೃಪಾಲ ||೩|| ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ ಭಾಸ್ಕರಕೋಟಿ ಸುತೇಜಪ್ರಕಾಶ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಡಿರೆ ನಡಿರೆ ನೋಡುವ ಶ್ರೀಕೃಷ್ಣನ

(ಭೀಮಪಲಾಸ್ ರಾಗ ತೀನ್ ತಾಳ ) ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ ||ಧ್ರುವ|| ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ ಅಡಿಗಳಾಶ್ರಯ ಹಿಡುವ ಮಂಡಲದೊಳು ||೧|| ತುಡುಗತನದಿ ಬಂದು ಕದಿದ ಬೆಣ್ಣೆಯ ಮೆದ್ದು ಒಡನೆ ಗೋಪೇರ ಕಾಡಿದ ನೋಡಮ್ಮ ||೨|| ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ ತಡೆಯದೆ ಧುಮುಕಿದ ಮಡುವಿನೊಳು ||೩|| ಕ್ರೀಡಿಸಿ ಗೋಪೇರ ಉಡುಗೆ ಸೆಳೆದುಕೊಂಡು ಒಡನೆ ಗಿಡವನೇರಿದ ನೋಡಮ್ಮ ||೪|| ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು ಒಡನೆ ಉಡುಗೆ ನೀಡಿದ ನೋಡಮ್ಮ ||೫|| ಬಡವರಿಗಳವಲ್ಲ ಪೊಡವಿಯೊಳಗಿದು ಆಡಿದಾನಂದದಾಟ ನೋಡಮ್ಮ ||೬|| ಹಿಡಿಯಹೋಗಲು ಮೂಢ ಮಹಿಪತಿಯ ನೋಡಿ ಒಡಲ ಹೊಕ್ಕು ಕೂಡಿದ ಒಡೆಯನಮ್ಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೇಸು ಲೇಸಾಯಿತೆನ್ನ ಜನುಮ ನೋಡಿ

(ಭೀಮಪಲಾಸ್ ರಾಗ ತೀನ್ ತಾಳ) ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದ ಕೈಗೂಡಿ ||ಧ್ರುವ|| ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿದುತ್ತೀರ್ಣಾಗಲರಿಯೆ ಇನ್ನೊಬ್ಬರಿಗೇನು ಮುಚ್ಚುಮರಿಯೆ ||೧|| ಕೋಟಿ ಜನ್ಮದಲಿ ಮಾಡಿದ ಸುಪುಣ್ಯ ನಾಟಿ ಬಂತೆನ್ನೊಳಗಸು ತಾರ್ಕಣ್ಯ ನೀಟದೋರಿತು ಘನ ಸುಚೈತನ್ಯ ನೋಟ ನೆಲೆಗೊಂಡಾಯಿತು ಧನ್ಯ ||೨|| ತಾನೆ ತಾನಾದೆನ್ನೊಳು ಬಂದು ನೋಡಿ ಭಾನುಕೋಟಿ ಪ್ರಕಾಶ ದಯಮಾಡಿ ದೀನ ಮಹಿಪತಿಗೆ ಸ್ವಸುಖ ನೀಡಿ ಮನೋಹರ ಮಾಡಿದ ಮನಗೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಲದೆಲೆಯ ಮ್ಯಾಲೆ ಮಲಗಿ

( ಬಸಂತ್ ರಾಗ ದಾದರಾ ತಾಳ) ಆಲದೆಲೆಯ ಮ್ಯಾಲೆ ಮಲಗ್ಯುಂಗುಟ ಚಪ್ಪರಿಪನು ನೀನಾರೈ ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈ ||ಧ್ರುವ|| ಚೆಲುವ ಕಂಗಳ ನೋಟದಲ್ಹೊಳೆಯುತ ಜಲದೊಳಗಾಡುವನಾರೈ ಕಾಲುಡುಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನೀನಾರೈ ||೧|| ಕೋರ್ಹಲ್ಲಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ ನರಮೃಗರೂಪದಿ ತರಳಗೊಲಿದು ಭರದಲಿ ಬಂದವನಾರೈ ||೨|| ಒಪ್ಪಿಲಿ ಮೂರು ಪಾದವ ಭೂಮಿಯೊಪ್ಪಿಸಿಕೊಂಡವನಾರೈ ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ ||೩|| ಬಳ್ಳಿ ಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ ಗೊಲ್ಲತಿಯರ ಮೋಹಿಸಿ ಎಳೆದಾಡುವ ಚೆಲುವನು ನೀನಾರೈ ||೪|| ಒದಗಿ ತ್ರಿಪುರದಲಿ ಹಳಿದು ನಾರೇರ ವ್ರತ ಚದುರನು ನೀನಾರೈ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು

(ಕಾಂಬೋಧ (ಭೂಪ್) ರಾಗ ತ್ರಿತಾಳ) ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿಹ ಸಾಧು ಬಲ್ಲ ಖೂನ ||ಧ್ರುವ|| ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು ||೧|| ಹರಿಯದ ಹರಿಯಿತು ಮುರಿಯದ ಮುರಿಯಿತು ಹುರಿಯಲೊಂದು ಮರೆಯದ ಮರೆಯಿತು ಅರಿಯದ ಅರಿಯಿತು ಅರಿವಿಲೊಂದು ಸುರೆಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದ ಬೆರೆಯಿತು ಕುರಿವಿಲೊಂದು ||೨|| ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ

(ಬಿಹಾಗ್ ರಾಗ ದಾದರಾ ತಾಳ) ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ ||ಧ್ರುವ|| ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ ||೧|| ಇಂದಿರೇಶನು ಈತ ವಂದಿತ ತ್ರೈಲೋಕನಾಥ ಚಂದವಾಗಿ ಸುಳಿದ ಬಾಲಮುಕುಂದನೀತ ||೨|| ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ ||೩|| ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ ವಂಶ ಕೌರವರ ತಾನು ಸಂಹರಿಸಿದಾತ ||೪|| ಬಾಲಕನಹುದೀತ ಮೂಲೋಕ ಪಾಲಕನೀತ ಸಲಹುತಿಹ ಮಹಿಪತಿ ಮೂಲಾಗ್ರಜನೀತ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀರಂಗನಾಟದ ಪರಿಯಾ

(ಕಾಫೀ ರಾಗ ತಾಳ-ತ್ರಿತಾಳ) ಶ್ರೀರಂಗನಾಟದ ಪರಿಯಾ ತೋರುದು ನೋಡಚ್ಚರಿಯಾ ||ಪ|| ದೇವಕಿ ಕಂದಾ ದೇವ ಮುಕುಂದಾ ಮಾವ ಕಂಸನ ಕೊಂದಾ ಹಾವಿನ ಫಣಿ ಮೆಟ್ಯಾಡಿದ ಛಂದಾ ಕಾವನಯ್ಯ ಶ್ರೀ ಗೋವಿಂದಾ ||೧|| ಪೊಸ ಪರಿ ಆದವು ಕುಲಶಿಖಮಣಿಯಾ ಅಸು ಹೀರಿದಾ ಪೂತನಿಯಾ ಶಿಶುವಾಗಿ ನಂದಯಶೋದೆಯಾ ಮನಿಯಾ ಮೊಸರು ಹಾಲು ಬೆಣ್ಣಿಗೇ ದಣಿಯಾ ||೨|| ವಸುದೇವಾತ್ಮಜ ಪಶುಪತಿಪ್ರೀಯಾ ಕುಸುಮನಾಭನೇ ಶೇಷಶಯ್ಯಾ ಭಾಸ್ಕರ ಕೋಟಿಪ್ರಕಾಶ ನಮ್ಮಯ್ಯಾ ಲೇಸಾಗಿ ಹೊರೆವಾ ಮಹಿಪತಿಯಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ

( ಪೀಲೂ ರಾಗ ದಾದರಾ ತಾಳ) ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ||ಧ್ರುವ|| ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ ||೧|| ತುಂಬಿ ತುಳುಕಿತಾನಂದ ಗುಂಭ ಗುರುತ ಕಂಡಿನ್ನು ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ ||೨|| ಗುಪ್ತಲಿದ್ದ ಧನವು ತಾ ಪ್ರಾಪ್ತವ್ಯಾನಂತವಾಯಿತು ತಪ್ಪದೆ ಮಹಿಪತಿಗೆ ತೃಪ್ತಿಹೊಂದಿತು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು

(ಮಿಶ್ರಪೀಲೂ ರಾಗ ಕೇರವಾ ತಾಳ) ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು ||ಪ|| ಸಿಕ್ಕಿದ್ಯೆಲ್ಲೋ ನಮ್ಮ ಕೈಯಾ ಹೊಕ್ಕು ಮನಿಯಾ ಹಕ್ಕಿಯೊಲಾದ್ಯೋ ತೆಕ್ಕಿಯಾ ಪುಕ್ಕಸಾಟಿಯಾ ||೧|| ಬಿಟ್ಟರ ಗೊಲ್ಲತೇರಲ್ಲೋ ಕಟ್ಟಿದಾ ಸೊಲ್ಲೋ ಮುಟ್ಟಿ ಬಿಡುವರಲ್ಲೋ ಘಟ್ಟ್ಯಾಗಿ ನಿಲ್ಲೋ ||೨|| ನಾವು ಬಲ್ಲೆವು ನಿನ್ನಾಟಾ ಎವಿ ಹಾಕು ನೋಟಾ ಹವಣಿಸಿ ಹಿಡಿದೇವೋ ನೀಟಾ ಭಾವಿಸಿ ಈ ಮಾಟಾ ||೩|| ಬಲ್ಲತನವ ದೋರಿದ್ಯೋ ಇಲ್ಲೆ ಮರುಳಾದ್ಯೋ ನಿಲ್ಲೆ ನಮ್ಮೊಳು ನೀನಾದ್ಯೋ ಎಲ್ಲಿಗೆ ಹೋದ್ಯೋ ||೪|| ವಶವಾಗಲಿಕ್ಕೆ ನಮಗ ವಸುಧಿಯೊಳಗ ಯಶೋದೆ ಹಡೆದಳು ಈಗ ಲೇಸಾಗಿ ನಿನಗ ||೫|| ನಾವು ಹಿಡಿದೇವೆಂಬು ಮಾತಾ ಪೂರ್ವಾರ್ಜಿತಾ ನೆವನ ಮಾಡಿತೋ ನವನೀತಾ ಸವಿದೋರಿ ಹಿತಾ ||೬|| ಭಾನುಕೋಟಿ ಸುವುದಯಾ ಮುನಿಜನಾಶ್ರಯಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉಂಬುವ ಬನ್ನಿರೋ ನೀಟ ಅನುಭವದೂಟ

(ಮಾಂಡ್ ರಾಗ ಕೇರವಾ ತಾಳ) ಉಂಬುವ ಬನ್ನಿರೋ ನೀಟ ಅನುಭವದೂಟ ||ಧ್ರುವ|| ಎಡಿಯು ಬಡಿಸಿ ಪೂರ್ಣ ಗೂಡಿನೊಳಿಟ್ಟಿದೆ ಖೂನ ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ ||೧|| ತುತ್ತು ಕೊಂಬುದು ಬ್ಯಾಗ ಸತ್ಸಂಗದಲಿ ನೀವೀಗ ಅತಿಶಯಾನಂದ ಭೋಗ ಉತ್ತಮ ಯೋಗ ||೨|| ಕಲ್ಪನೆಂಬುದು ನೊಣ ಬೀಳಗೊಡದೆ ಜತನ ಬಳೆದುಕೊಂಡುಂಬುವ ಜಾಣ ಕಳೆದನು ಮಾನ ||೩|| ಸವಿಸವಿ ಮಾಡಿಕೊಂಡು ಸೇವಿಸುವದು ಮನಗಂಡು ಪಾವನಾಗಬೇಕು ಉಂಡು ಸವಿಸೂರೆಗೊಂಡು ||೪|| ಉಂಡು ಮಹಿಪತಿ ನೋಡಿ ಕೊಂಡಾಡಿದಾನಂದಗೂಡಿ ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು