ಬಾಗೇಪಲ್ಲಿ ಶೇಷದಾಸರು

ಅಲ್ಲಿನೋಡಿ ಶ್ರೀನಿವಾಸನ

ಅಲ್ಲಿನೋಡಿ ಶ್ರೀನಿವಾಸನ ||ಪ||
ಪುಲ್ಲನಾಭನು ಸಿರಿನಲ್ಲೆಯಿಂದೊಪ್ಪಿರುವುದ ನೋಡಿ ||ಅ||

ಶೇಷನ ಫಣೆಯೊಳು ವಾಸವ ಮಾಡುತ  
ದಾಸಜನರ ಮನ ತೋಷಪಡಿಸುವುದ ನೋಡಿ||೧||

ಆದರದಿಂದಲಿ ಸಾಧನಪುರದೊಳು
ಸಾಧುಜನರ ಮನ ಮೋದಪಡಿಸುವುದ ನೋಡಿ||೨||


ಪ್ರಾಣನಾಥವಿಠಲನು ಸಾನುರಾಗದಲಿ ವೇಣು-
ಗಾನವ ಮಾಡುತ ಸಿರಿಮಾನಿನಿಯಿಂದೊಪ್ಪಿರುವುದ ನೋಡಿ ||೩||


-- ಬಾಗೇಪಲ್ಲಿ ಶೇಷದಾಸರು




 

ದಾಸ ಸಾಹಿತ್ಯ ಪ್ರಕಾರ
ಬರೆದವರು