ಯಾದವರಾಯ ಬೃಂದಾವನದೊಳು

ಯಾದವರಾಯ ಬೃಂದಾವನದೊಳು

ಯಾದವರಾಯ ಬೃಂದಾವನದೊಳು ವೇಣು ನಾದವ ಮಾಡುತಿರೆ ||ಪ|| ರಾಧಾ ಮುಂತಾದ ಗೋಪಿಯರೆಲ್ಲ ಮಧುಸೂದನ ನಿನ್ನನು ಸೇವಿಸುತಿರೆ ಸುರರು ಅಂಬರದಿ ಸಂದಣಿಸಿರೆ ಅಪ್ಸರ ಸ್ತ್ರೀಯರು ಮೈ ಮರೆತಿರೇ||ಅನುಪಲ್ಲವಿ|| ಕರದಲಿ ಕೊಳಲನು ಊದುತ ಪಾಡುತ ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ ಹರಿ ಹರ ಬ್ರಹ್ಮರು ನಲಿದಾಡುತಿರೆ ತುಂಬುರು ನಾರದರು ಪಾಡುತಿರೆ||ಚರಣ ೧|| ಅರವಿಂದ ದಳ ನಯನ ಕರುಗಳ ಸಹಿತಲೇ ಗೋಕುಲವೆಲ್ಲ ಸಿರಿ ಕಾಗಿನೆಲೆಯಾದಿ ಕೇಶವ ರಾಯ ತರುಗಳ ಸಹಿತಲೇ ವರಗೋಪಾಲ||ಚರಣ ೨||
ದಾಸ ಸಾಹಿತ್ಯ ಪ್ರಕಾರ
ಬರೆದವರು