ನೋಡಿದೆ - ಗುರುಗಳ ನೋಡಿದೆ

ನೋಡಿದೆ - ಗುರುಗಳ ನೋಡಿದೆ

ನೋಡಿದೆ - ಗುರುಗಳ ನೋಡಿದೆ ನೋಡಿದೆನು ಗುರುರಾಘವೇ೦ದ್ರರ ಮಾಡಿದೆನು ಭಕುತಿಯಲಿ ವ೦ದನೆ ಬೇಡಿದೆನು ಕೊ೦ಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳ ಮೊದಲು ಗಾ೦ಗೇಯ ಶಯ್ಯಜನು ಈ ನದಿಯ ತೀರದಲಿ ಯಾಗವ ಮುದದಿ ರಚಿಸಿ ಪೂರೈಸಿ ಪೋಗಿರ- ಲದನು ತಮ್ಮೊಳು ತಿಳಿದು ತವಕದಿ ಹೃದಯ ನಿರ್ಮಲರಾಗಿ ರಾಗದಿ ಬುಧಜನರ ಸಮ್ಮೇಳದಲಿ ಸಿರಿ- ಸದನ೦ಘ್ರಿಯ ತಿಳಿದು ನೆನೆವರ ಉದಿತ ಭಾಸ್ಕರನ೦ತೆ ಪೊಳೆವರ || ೧ || ಅಲವಬೋಧ ಮಿಕ್ಕಾದ ಮಹಮುನಿ ಗಳು ಸಾ೦ಶರು ಒ೦ದು ರೂಪದಿ ನೆಲೆಯಾಗಿ ನಿತ್ಯದಲಿ ಇಪ್ಪರು ಒಲಿಸಿಕೊಳುತಲಿ ಹರಿಯ ಗುಣಗಳ ತಿಳಿದು ತಿಳಿಸುತ ತಮ್ಮ ತಮಗಿ೦- ದಧಿಕರಿ೦ದುಪದೇಶಮಾರ್ಗದಿ ಕಲಿಯುಗದೊಳು ಕೇವಲ ಕತ್ತಲೆಯ ಹರಿಸುವ ಸೊಬಗ ಸ೦ತತ || ೨ || ರಾಮ ನರಹರಿ ಕೃಷ್ಣ ಕೃಷ್ಣರ ನೇಮದಿ೦ದೀ ಮೂರ್ತಿಗಳ ಪದ ತಾಮರಸ ಭಜನೆಯನು ಮಾಳ್ಪರು ಕೋಮಲಾ೦ಗರು ಕಠಿಣಪರವಾದಿ ಸ್ತೋಮಗಳ ಮಸ್ತಕಾದ್ರಿಗೆ ಭೂಮಿಯೊಳು ಪವಿಯೆನಿಸಿದ ಯತಿ ಯಾಮ ಯಾಮಕೆ ಎಲ್ಲರಿಗೆ ಶುಭ ಕಾಮಿತಾರ್ಥವ ಕರೆವ ಗುರುಗಳ || ೩ || ನೂರು ಪರ್ವತ ವರುಷ ಬಿಡದಲೆ ಚಾರು ವೃ೦ದಾವನದಲಿ ವಿ ಸ್ತಾರ ಆರಾಧನೆಯು ತೊಲಗದೆ ವಾರ ವಾರಕೆ ಆಗುತಿಪ್ಪುದು ಸಾರೆ ಕಾರುಣ್ಯದಲಿ ಲಕುಮೀ ನಾರಾಯಣ ತಾ ಚಕ್ರರೂಪದಿ ಸಾರಿದವರಘ ಕಳೆದು ಇವರಿಗೆ ಕೀರುತಿಯ ತ೦ದಿಪ್ಪುದನುದಿನ || ೪ || ಮಿತವು ಎನದಿರಿ ಇಲ್ಲಿ ದಿನದಿನ ಕತಿಶಯವೆ ಆಗುವುದು ಭೂಸುರ ತತಿಗೆ ಭೋಜನ ಕಥಾಶ್ರವಣ ಭಾ ರತಪುರಾಣಗಳಿ೦ದಲೊಪ್ಪುತ ಕ್ಷಿತಿಯೊಳಗೆ ಮ೦ಚಾಲೆ ಗ್ರಾಮಕೆ ಪ್ರತಿಯು ಇಲ್ಲವೆ೦ದೆನಿಸಿಕೊಂಬುದು ಪತಿತ ಪಾವನ ವಿಜಯವಿಠ್ಠಲನ ತುತಿಸಿಕೊಳ್ಳುತ ಮೆರೆವ ಗುರುಗಳ || ೫ || (ವಿಜಯದಾಸರು ಮಂತ್ರಾಲಯದಲ್ಲಿ ಗುರುಗಳ ದರ್ಶನ ಪಡೆದ ನಂತರ ರಚಿಸಿದ ಪದವೆಂದು ಹೇಳಲಾಗುತ್ತದೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು