ಸುಮ್ಮನೆ ವೈಷ್ಣವನೆಂಬಿರಿ

ಸುಮ್ಮನೆ ವೈಷ್ಣವನೆಂಬಿರಿ

(ನಾರಾಯಣಿ ರಾಗ ಆದಿತಾಳ) ಸುಮ್ಮನೆ ವೈಷ್ಣವನೆಂಬಿರಿ ಪರ- ಬೊಮ್ಮ ಸುಜ್ಞಾನವನರಿಯದ ಮನುಜನ ||ಪ|| ಮುಖವ ತೊಳೆದು ನಾಮವನಿಟ್ಟೆನಲ್ಲದೆ ಸುಖತೀರ್ಥ ಶಾಸ್ತ್ರವನೋದಿದೆನೆ ಸುಖಕೆ ಶೃಂಗಾರಕೆ ಮಾಲೆ ಹಾಕಿದೆನಲ್ಲದೆ ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||೧|| ಊರು ಮಾತುಗಳಾಡಿ ದಣಿದೆನಲ್ಲದೆ ನಾರಾಯಣ ಕೃಷ್ಣ ಶರಣೆಂದೆನೆ ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ ||೨|| ನರೋತ್ತಮರಿಗಧಿಕ ಗಂಧರ್ವರಿಗಧಿಕ ಸುರೇಂದ್ರಗಧಿಕ ಹರಗಧಿಕ ವಿರಿಂಚಿಗಧಿಕ ಸಿರಿಗಧಿಕ ಹರಿಸರ್ವೋತ್ತಮನೆಂದು ತಿಳಿದೆನೇನಯ್ಯ ||೩|| ಜಗತು ಸತ್ಯವೆಂದು ಪಂಚಭೇದವ ತಿಳಿದು ಮಿಗೆ ರಾಗದ್ವೇಷಂಗಲನು ವರ್ಜಿಸಿ ಭಗವಂತನ ಲೀಲೆ ಶ್ರವಣ ಕಥೆಗಳಿಂದ ನಿಗಮಗೋಚರನೆಂದು ತಿಳಿದೆನೇನಯ್ಯ ||೪|| ಗಂಗೆಯಲಿ ಮೈಮಣ್ಣ ತೊಳೆದೆನಲ್ಲದೆ ಭವ ಹಿಂಗುವ ಸ್ನಾನವ ಮಾಡಿದೆನೆ ರಂಗವಿಠಲನ ನಿಜವಾದ ದಾಸರ ಸಂಗಸುಖವೆಂದು ತಿಳಿದೆನೇನಯ್ಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು