ಯಾತಕೆ ಮರುಳಾದೆಯೋ ಮನವೆ

ಯಾತಕೆ ಮರುಳಾದೆಯೋ ಮನವೆ

(ರಾಗ ಶಂಕರಾಭರಣ ಝಂಪೆತಾಳ) ಯಾತಕೆ ಮರುಳಾದೆಯೋ ಮನವೆ ಏತಕೆ ಮರುಳಾದೆಯೋ ಯಾತಕೆ ಮರುಳಾದೆ ಕಾಕುದೈವವ ನಂಬಿ ಕಾತರಪಟ್ಟು ನೀ ನೀತಿಮಾರ್ಗವ ಬಿಟ್ಟು ||ಪ|| ಮಾರಿಯು ಮಸಣಿಯು ಕಾಯ್ವುದೆ ನಿನ್ನ ಕೋರಿಕೆಯನು ಕೊಡಬಲ್ಲುದೆ ಧೀರನು ನೀನಾಗಿ ಹರಿಪಾದವ ನಂಬಲು ಆರಿಗು ತೀರದ ಮುಕುತಿಯ ಕೊಡುವನು ||೧|| ಆ ಜಾತಿ ಈ ಜಾತಿ ಎನ್ನದೆ ನೀನು ಸೋಜಿಗವ ಪಟ್ಟು ಸಾಯದೆ ಮೂಜಗದೀಶನ್ನ ದಾಸರ ನಂಬಲು ಮಾಜದೆ ಜಾನದ ದಾರಿಯ ತೋರ್ಪರು ||೨|| ಏನಾಯ್ತು ಈ ಕರ್ಮಮಾರ್ಗದಿ ನೀನು ನಾನಾ ದುಃಖವ ಪೊಂದಿದೆ ಇನ್ನಾದರು ಶ್ರೀ ಅಚ್ಯುತನ ನೆನೆದರೆ ಜಾನದ ತತ್ವವು ತಾನೆ ತಿಳಿವುದಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು