ಮಾತು ಮಾತಿಗೆ ಕೇಶವ ನಾರಾಯಣ

ಮಾತು ಮಾತಿಗೆ ಕೇಶವ ನಾರಾಯಣ

ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ - ಹೇ ಜಿಹ್ವೆ ||ಪಲ್ಲವಿ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು ಪ್ರೀತಿಲಿ ನೆನೆದು ಸದ್ಗತಿಯ ಹೊಂದದೆ ವ್ಯರ್ಥ ಮಾತುಗಳಾಡಲ್ಯಾಕೆ - ಹೇ ಜಿಹ್ವೆ ||ಅನುಪಲ್ಲವಿ|| ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣಹರವು ಸುಲಭವಾಗಿಹುದು ಸುಖಕೆ ಕಾರಣವಿದು ಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು ತಿಳಿದು ತಿಳಿಯದಿಹರೇ - ಹೇ ಜಿಹ್ವೆ ||೧|| ತರಳೆ ದ್ರೌಪದಿಯ ಸೀರೆ ಸೆಳೆಯುತಿರೆ ಹರಿ ನೀನೆ ಗತಿಯೆನಲು ಪರಮ ಪುರುಷ ಭವಭಂಜನ ಕೇಶವ ದುರುಳರ ಮರ್ದಿಸಿ ತರುಣಿಗೆ ವರವಿತ್ತ ಹರಿನಾಮ ಪ್ರಿಯವಲ್ಲವೇ - ಹೇ ಜಿಹ್ವೆ||೨|| ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ ನಾಮವೇ ಗತಿಯೆನಲು ಪ್ರೇಮದಿಂದಲಿ ಬಂದು ಕಾಮಿತಾರ್ಥಗಳಿತ್ತ ಸ್ವಾಮಿ ಹಯವದನನ ನಾಮವ ನೆನೆಯುತ್ತ ಯಾಮ ಯಮಕೆ ಬಿಡದೆ - ಹೇ ಜಿಹ್ವೆ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು