ಭಕ್ತಿ ಬೇಕು ವಿರಕ್ತಿ ಬೇಕು

ಭಕ್ತಿ ಬೇಕು ವಿರಕ್ತಿ ಬೇಕು

(ಶಂಕರಾಭರಣರಾಗ ಅದಿತಾಳ) ಭಕ್ತಿ ಬೇಕು ವಿರಕ್ತಿ ಬೇಕು ಸರ್ವ- ಶಕ್ತಿ ಬೇಕು ಮುಕ್ತಿಯ ಬಯಸುವಗೆ ||ಪ|| ಸತಿ ಅನುಕೂಲ ಬೇಕು ಸುತನಲಿ ಗುಣಬೇಕು ಮತಿವಂತನಾಗಬೇಕು ಮತ ಒಂದಾಗಿರಬೇಕು ||೧|| ಜಪದ ಜಾಣುವೆ ಬೇಕು ತಪದ ನೇಮವೆ ಬೇಕು ಉಪವಾಸ ವ್ರತ ಬೇಕು ಉಪಶಾಂತವಾಗಿರಬೇಕು ||೨|| ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕು ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು