ನೀನೆ ಸಜ್ಜನರ ಬಂಧೂ

ನೀನೆ ಸಜ್ಜನರ ಬಂಧೂ

ಹರ(ಡ)ಪನಹಳ್ಳಿ ಭೀಮವ್ವನವರ ರಚನೆ - ಅಂಕಿತ "ಭೀಮೇಶ ಕೃಷ್ಣ" ರಾಗ : ಪೂರ್ವಿಕಲ್ಯಾಣಿ ರೂಪಕ ತಾಳ ನೀನೆ ಸಜ್ಜನರ ಬಂಧೂ... ಕಾರುಣ್ಯ ಸಿಂಧೂ ಕರಿಮರಿ ಬಳಗ ಬಂದೊದಗಿದರೇನೂ ಪರಿಪರಿ ಕ್ಲೇಶವ ಬಿಡಿಸಲಿಲ್ಲ ಹರಿ ನೀನೆ ಗತಿ ಎಂದರೆ ಆ ಕ್ಷಣದಲ್ಲಿ ಕರಿ ಬಂಧನ ಪರಿಹರಿಸಿದೆ ಕೃಷ್ಣಾ.... ಯಾರಿದ್ದರೂ ಭವ ಘೋರ... ದುರಿತ ಯಮ ಬಾಧೆಗಳ ತಪ್ಪಿಸುವರಿಲ್ಲ ಶ್ರೀ ರಮಣನೆ ಭೀಮೇಶ ಕೃಷ್ಣನೆಂದೂ ಸಾರುವರಿಗೆ ಕರುಣೆ ವಾರಿಧಿ ಹರಿಯೇ.....
ದಾಸ ಸಾಹಿತ್ಯ ಪ್ರಕಾರ
ಬರೆದವರು