ನಾರಾಯಣ ನಿನ್ನ ನಂಬಿದೆ

ನಾರಾಯಣ ನಿನ್ನ ನಂಬಿದೆ

(ರಾಗಶಂಕರಾಭರಣ ಅಟ್ಟತಾಳ) ನಾರಾಯಣ ನಿನ್ನ ನಂಬಿದೆ , ಲಕ್ಷ್ಮೀ- ರಮಣ ನಿನ್ಹೊರತು ಪೊರೆವ ದೈವವೆಲ್ಲಿದೆ ||ಪ|| ನಾ ಮೀರಿ ದುಷ್ಕರ್ಮವ ಮಾಡಿದೆ ಅಪಾರಮಹಿಮ ದಯಾನಿಧೇ ||ಅ.ಪ|| ನಾನಾ ಯೋನಿಗಳಿಂದ ಬಂದೆನೋ ಮಾನ ತಾಳಲಾರದೆ ಬಲು ನೊಂದೆನೋ ದೀನರಕ್ಷಕ ಎನ್ನ ಗತಿ ಮುಂದೇನೋ ಮಾನದಿಂದಲಿ ರಕ್ಷಿಸುವಂಥ ದೊರೆ ನೀನೋ ||೧|| ದಾಸರ ಮನ ಉಲ್ಲಾಸನೆ ಶ್ರೀಶ ಆಶ್ರಿತ ಜನರ ಪೋಷನೆ ಸಾಸಿರ ಅನಂತ ಮಹಿಮನೆ ಕ್ಲೇಶ ನಾಶಪಡಿಸೋ ಶ್ರೀನಿವಾಸನೆ ||೨|| ರಂಗನಗರ ಉತ್ತುಂಗನೆ ಗಂಗಾಜನಕ ಗರುಡತುರಂಗನೆ ಉ- ತ್ತುಂಗ ಗುಣಗಳಂತರಂಗನೆ ಅ- ನಂಗನ ಪೆತ್ತ ರಂಗವಿಠಲನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು