ಜಾರತ್ವವನು ಮಾಡಿದ ಪಾಪಗಳೆಗೆಲ್ಲ

ಜಾರತ್ವವನು ಮಾಡಿದ ಪಾಪಗಳೆಗೆಲ್ಲ

ಜಾರತ್ವವನು ಮಾಡಿದ ಪಾಪಗಳಿಗೆಲ್ಲ ಗೋಪೀಜನ ಜಾರನೆಂದರೆ ಸಾಲದೆ ? ಚೋರತ್ವವನು ಮಾಡಿದ ಪಾಪಗಳಿಗೆಲ್ಲ ನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ ಮಾವನ ಕೊಂದವನೆಂದರೆ ಸಾಲದೆ? ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ ಪತಿತಪಾವನನೆಂದು ಕರೆದರೆ ಸಾಲದೆ? ಇಂತಿಪ್ಪ ಮಹಿಮೆಯೊಳೊಗೊಂದನಾದರೂ ಒಮ್ಮೆ ಸಂತಸದಿ ನೆನೆಯೆ ಸಲಹುವ ನಮ್ಮ ಸಿರಿಕೃಷ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ