ಕಾಳಬೆಳದಿಂಗಳು ಈ ಸಂಸಾರ

ಕಾಳಬೆಳದಿಂಗಳು ಈ ಸಂಸಾರ

(ರಾಗ ನಾದನಾಮಕ್ರಿಯೆ ಛಾಪುತಾಳ) ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ|| ಸತ್ಯಕ್ಕೆ ಧರ್ಮನು ಲೆತ್ತವನಾಡಲು ಅರ್ಧ ಭಾಂಡಾರವೆಲ್ಲವ ಸೋತು ಮತ್ತೆ ವಿರಾಟರಾಯನ ಮನೆಯಲ್ಲಿ ತೊತ್ತಾದಳು ದ್ರೌಪದಿ ಒಂದು ವರುಷ ||೧|| ಪುಂಡರೀಕಾಕ್ಷ ಪುರುಷೋತ್ತಮ ಹರಿಯು ಬಂಡಿಬೋವನಾದ ಪಾರ್ಥನಿಗೆ ಭೂ - ಮಂಡಲನಾಳುವ ಹರಿಶ್ಚಂದ್ರರಾಯನು ಕೊಂಡವ ಕಾಯಿದನು ಹೊಲೆಯನಾಳಾಗಿ ||೨|| ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಾಗಿಲ ಕಾಯ್ವರು ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂತೆ ಗೋಣ ಮೇಲೆತ್ತುವರು ||೩|| ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ಬೆಂಬಲದಲಿ ನಲಿನಲಿವುತಿಹರು ಬೆಂಬಲತನ ತಪ್ಪಿ ಬಡತನ ಬಂದರೆ ಇಂಬು ನಿನಗಿಲ್ಲ ನಡೆಯೆಂಬರು ||೪|| ಏರುವ ದಂಡಿಗೆ ನೂರಾಳು ಮಂದಿಯು ಮೂರುದಿನದ ಭಾಗ್ಯವು ಝಣಝಣವು ನೂರಾರು ಸಾವಿರ ದಂಡವ ತೆತ್ತರೆ ರಂಗವಿಠಲನನೆ ಸರಿಯೆಂಬೊರಯ್ಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು