ಏನು ಪೇಳುವೆ ಇಂತು ಆ ಮಾನವರೊಡನೆ

ಏನು ಪೇಳುವೆ ಇಂತು ಆ ಮಾನವರೊಡನೆ

( ಸಾವೇರಿ ರಾಗ ತ್ರಿವಿಡೆತಾಳ) ಏನು ಪೇಳುವೆ ಇಂತು ಆ ಮಾನವರೊಡನೆ ಮೌನದಿ ಮನದೊಳು ನಗುತಿಹನಲ್ಲದೆ ||ಪ|| ವೇದಾಂತ ಶಾಸ್ತ್ರವೆಂತಿರುತಿಹುದೆಂಬ ಹಾದಿಯ ತಿಳಿಯದೆ ಅವರು ಪರಜೀವರ ಭೇದದ ಬಗೆಯಿದೆಂಬ ಆವುದರಿಯದ ಮೂಢ ವಾದದಲಿ ಮುಕ್ತಿಯ ಮೆರೆದಾಡುವವರೊಳು ||೧|| ತನುವಿದೆ ತಾನೆಂದು ಮನೆ ಧನ ತನದೆಂದು ವನಿತಾದಿಯೊಳಗೆ ಆಸಕ್ತನಾಗುತಲೆ ತನಗೆಂದು ಸ್ಥಿರವೆಂದು ಭಾವಿಸಿ ಮೋಹದಿ ಚಿನುಮಯಾತ್ಮಕನನೊಮ್ಮೆ ನೆನೆಯದೆ ಇಹರೊಳು ||೨|| ಹರಿ ಭಜನೆಯ ತಾವು ಮಾಡರು, ಮಾಳ್ಪರೊಳು ಹಿರಿಯತನದಿ ಬುದ್ಧಿ ತಾವು ಹೇಳುವರು ಮರುಳೆ ನೀನೀಗಲೆ ಅರಿತೆ ನೀ ರೀತಿಯನು ಬರಿವಲ್ಲ ನೋಳ್ಪುದು ಸರಿಯಲ್ಲ ಎನಿಪರೊಳು ||೩|| ನಿನ್ನದಿದೆಲ್ಲವು ನೀನೆ ಪಾಲಿಸತಕ್ಕದು ಇನ್ನು ನೀನೀ ಪರಿ ಮರುಳಹರೆ ಮನುಜ ಬಣ್ಣ ನೀನದರಿಂದ ತಿಳಿಯದು ಎನಗೆಂದು ಭಿನ್ನ ಭ್ರಾಂತಿಯೊಳಿಂತು ಮರುಳಾದವರೊಳು ||೪|| ಆಗದಾಗದು ಇಂಥ ಜನರೊಡನಾಡಲು ಹೇಗಾದರು ಬಿಡರು ಇವರು ಹೀನ ಬುದ್ಧಿಗಳ ಯೋಗ ಮಾಯಾಧೀಶನಾದ ನಿತ್ಯಾತ್ಮ ನೀ ಬೇಗದಿ ಎನ್ನನು ತಡಿಗಾಣಿಸಯ್ಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು