ಏಕಯ್ಯ ಎನ್ನ ನೀ ಪರಿಪಾಲಿಸೆ

ಏಕಯ್ಯ ಎನ್ನ ನೀ ಪರಿಪಾಲಿಸೆ

(ರಾಗ ಕಲ್ಯಾಣಿ ಝಂಪೆ ತಾಳ) ಏಕಯ್ಯ ಎನ್ನ ನೀ ಪರಿಪಾಲಿಸೆ ಲೋಕೈಕನಾಥ ನಿನಗೇಕೆ ಬೇಸರವಿಷ್ಟು ||ಪ|| ತೇರಿಗೊಂದೇ ಬಂಡಿ ಹೂಡಲೇಳೇ ಕುದುರೆ ಸೇರಿಸುತ ಕಟ್ಟಲು ಭುಜಂಗ ಹಗ್ಗ ಸಾರಥಿಯು ಕುಂಟನೈ ಹರಿಸೆ ಧರಣಿಯು ಇಲ್ಲ ಈ ರೀತಿಯಾದೊಡೆ ತಿರಿವ ದಿನಪನ ನೋಡು ||೧|| ಸಿರಿಯು ಧರಣಿಯು ನಿನಗೆ ಮಡದಿಯರು , ಮಾವನು ಹಿರಿಯ ರತ್ನಾಕರನು ರಜತಾದ್ರಿವಾಸಿ ಹಿರಿಯ ಮೊಮ್ಮಗನು ಓಷಧೀಷ ತಾ ಮೈದುನನು ದಾರಿದ್ರ್ಯವೇನಯ್ಯ ಎನ್ನ ಪೊರೆಯುದಕೆ ||೨|| ಅಂದು ಧ್ರುವನು ಕಾಯ್ದೆ ಅಂಬರೀಷನು ಧರ್ಮ - ನಂದನನ ಪೊರೆಯೆ ಸಾಲವನೆಲ್ಲಿ ತಂದೆ ಇಂದೆನ್ನ ಪೊರೆಯಲು ಅಂದಿತ್ತವರು ನೂಕುವರೆ ತಂದೆ ವೈಕುಂಠಪುರದೆರೆಯ ನರಹರಿಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು