ಎಲ್ಯಾಡಿ ಬಂದ್ಯೋ ನೀ ಹೇಳಯ್ಯ

ಎಲ್ಯಾಡಿ ಬಂದ್ಯೋ ನೀ ಹೇಳಯ್ಯ

ರಾಗ: ರೇಗುಪ್ತಿ ತಾಳ: ಛಾಪ ಎಲ್ಯಾಡಿ ಬಂದ್ಯೋ ನೀ ಹೇಳಯ್ಯ ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ ||ಪ|| ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ ಹೊಸಪರಿ ಸುದ್ದಿಯು ಹುಟ್ಟಿದೆ ಪುಸಿಯಲ್ಲ ಈ ಮಾತು ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ ಕೊರಳ ಪದಕವೆಲ್ಲಿ ನೀಗಿದೆ ಸರಕೆಲ್ಲ ಅವಳಲ್ಲಿ ಸಾಗಿದೆ ಆ ತರುಣಿ ಮಹಿಮೆ ಹೀಂಗಾಗಿದೆ ಕಳ್ಳತನವ ಹೀಗೆ ಮಾಡಿದೆ ನಿನ್ನ ಸುಳ್ಳು ಕಡೆಗೆ ನಾ ನೋಡಿದೆ ಎಲ್ಲರಿಗೂ ಠಕ್ಕು ಮಾಡಿದೆ ಚಲುವ ರಂಗವಿಠಲ ನಗೆಗೀಡಾದೆ (ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಶ್ರೀಪಾದರಾಜ ಸಂಪುಟದಿಂದ)
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ