ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ

ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ

( ದ್ವಿಜಾವಂತಿ ರಾಗ ಆದಿತಾಳ) ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ ಪಾಲಿಸೋ ಹರಿಯೆ ಬಂಧನಗಳ ನೀನಿಂದು ಓಡಿಸು ಎನ್ನ ಸಿಂಧುರವರದ ಸಿಂಧುಸುತೆಯ ರಮಣ ||ಪ|| ಗಂಗೆ ಕಾವೇರಿಯೊಳು ಅಂಗವ ತೊಳೆದರು ಹೋಗದು ಅಂಗದ ಕಲ್ಮಶವು ಹಿಂಗದೆ ನಾನಾ ಜಪಗಳು ಮಾಡಿದರು ಈ ಸಂಗವೆಂದಿಗೂ ಹರಿಯದು ರಂಗನೆ ನೀನು ಸಂಕಲ್ಪಿಸಿದೊಡೆ ಸಂಗ ಹಿಂಗಿ ಹೋಗುವುದಯ್ಯ ಪಾಪವು ಸಹಿತಲೆ ||೧|| ವ್ರತತಪ ದಾನಗಳಿಂದ ರಾಗದ್ವೇಷ ಗತಿಗೆಟ್ಟು ಪೋಪುದೇನೈ ಸತಿಸುತರಾಸೆಗಳು ಸುರರ ಪೂಜೆಗಳಿಂದ ಅತಿ ವೃದ್ಧಿಯಾಗುವುವೈ ಪತಿತಪಾವನ ನಿನ್ನ ಅನುದಿನ ನುತಿಸಲು ಶಿಥಿಲಗಳಾಗಿ ಇವುಗಳು ತೊಲಗುವವಲ್ಲದೆ ||೨|| ವೈಕುಂಠದರಸ ಎಂಬ ಸಿರಿನರಹರಿಯೆ ಪೋಷಿಸದಿದ್ದರೆ ನೀನು ಪಾಕಶಾಸನನು ಪಶುಪತಿಯೆ ಮೊದಲಾದ ಲೋಕಪಾಲರು ಪೊರೆವರೆ ಏಕ ಭಕ್ತಿಯಿಂದ ಏಕ ಚಿತ್ತದೊಳಿರ್ಪೆ ಲೋಕನಾಥನೆ ನೀ ಲೋಕಿಸಲು ಎನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು