ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ

ಎಷ್ಟು ದೂರವೋ ಎನುತಲಿದ್ದೆ

ದೃಷ್ಟಿಯಿಂದಲಿ ನಾನು ಕಂಡೆ

ಸೃಷ್ಟಿಗೀಶನೇ ಶ್ರೀರಂಗಶಾಯಿ ||

 

ಎಂಟು ಏಳನು ಕಳೆದುದರಿಂದ

ಬಂಟರೈವರ ತುಳಿದುದರಿಂದ

ಕಂಟಕನೊಬ್ಬನ ತರಿದುದರಿಂದ

ಬಂಟನಾಗಿ ಬಂದನೋ ಶ್ರೀರಂಗಶಾಯಿ ||

 

ವನ ಉಪವನಗಳಿಂದ

ಘನ ಸರೋವರಗಳಿಂದ

ಕನಕ ಗೋಪುರಗಳಿಂದ

ಘನಶೋಭಿತನೆ ಶ್ರೀರಂಗಶಾಯಿ ||

 

ವಜ್ರ ವೈಢೂರ್ಯದ ತೊಲೆಗಳ ಕಂಡೆ

ಪ್ರಜ್ವಲಿಪ ಮಹಾದ್ವಾರವ ಕಂಡೆ

ನಿರ್ಜರಾದಿ ಮುನಿಗಳ ಕಂಡೆ

ದುರ್ಜನಾಂತಕನೆ ಶ್ರೀರಂಗಶಾಯಿ ||

 

ರಂಭೆ ಊರ್ವಶಿಯರ ಮೇಳವ ಕಂಡೆ

ತುಂಬುರು ಮುನಿ ನಾರದರನು ಕಂಡೆ

ಅಂಬುಜೋದ್ಭವ ರುದ್ರರ ಕಂಡೆ

ಶಂಬರಾರಿಪಿತನೆ ಶ್ರೀರಂಗಶಾಯಿ ||

 

ನಾಗಶಯನನ ಮೂರುತಿ ಕಂಡೆ

ಭೋಗಿಭೂಷಣ ಶಿವನನು ಕಂಡೆ

ಭಾಗವತರ ಸಮ್ಮೇಳವ ಕಂಡೆ

ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||

 

ಇಲ್ಲಿ ಎಂಟು ಏಳನು ಕಳೆದುದರಿಂದ ಇದಕ್ಕೆ ಒಳ್ಳೆಯ ಅರ್ಥ ಇದೆ.

ದಾಸ ಸಾಹಿತ್ಯ ಪ್ರಕಾರ
ಬರೆದವರು