ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ

ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ

ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ ||ಪ||

ಮಾತೆ ಇದ್ದರು ದೃಢವೃತನಾದ ಧ್ರುವಗೆ ಶ್ರೀ-
ಪತಿ ನೀನೆ ಗತಿಯಾದೆ ಆರಾದರಯ್ಯ
ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ
ಗತಿ ನೋಡಿ ನರಹರಿ ಗತಿಪ್ರದ ನೀನಾದೆ ||೧||

ಭ್ರಾತರಾವಣನ ಸಹಜಾತ ವಿಭೀಷಣನ ನಿ-
ರ್ಭೀತನ ಮಾಡಿ ಕಾಯ್ದವರಾರಯ್ಯ
ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ
ಸಂತೈಸಿದಾನಾಥರಕ್ಷಕ ಹರಿಯಲ್ಲವೇ     ||೨||

ಬಂಧುಗಳಿರೆ ಗಜರಾಜನ ನಕ್ರವು
ಬಂದು ಬಾಧಿಸೆ ಬಂಧ ಬಂದು ಹರಿಸಿದರ್‍ಯಾರೊ
ಅಂದು ಇಂದು ಎಂದನಿಮಿತ್ತ ಬಂಧು ನೀ
ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ ||೩||

ಸುತರು ರಕ್ಷಕರೇನೊ  ಶತಸೂನುಗಳಿಗೆ ಪಿತ
ಧೃತರಾಷ್ಟ್ರಗೆ   ಕೊನೆಗಾರಾದರಯ್ಯ
ಇತರರ ಪಾಡೇನೊ ಶ್ರೀ ವೆಂಕಟೇಶನೆ
ಗತಿ ಎಮಗೆ ಉರದಾದ್ರಿವಾಸ ವಿಠಲನಲ್ಲವೆ     ||೪||

--- ಉರಗಾದ್ರಿವಾಸವಿಠಲರು



 

ದಾಸ ಸಾಹಿತ್ಯ ಪ್ರಕಾರ
ಬರೆದವರು