ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು

ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು


ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು
ಸಿಂಧುಮಥನದಿ ಸುಧೆಯನಿತ್ತವರಾರು
ನೊಂದು ಮುಳುಗಲು ವಸುಂಧರೆಯ ತಂದವರಾರು
ಕಂದ ಕರೆಯಲು ಬಂದ ಬಂಧುವಾರು
ಇಂದ್ರನೈಶ್ವರ್ಯವನು ತಂದು ಕೊಟ್ಟವರಾರು
ಮಂದನೃಪರನು ಕಾಡಿಕೊಂದವರಾರು
ಸುಂದರಾಂಗಿಯ ಸೆರೆಯ ಬಂದು ಬಿಡಿಸಿದರಾರು
ಕುಂದುಗಳನೆಣಿಸದೆ ಕಾವದಾರು
ನಂದಿನೇರಿದನಿಂಗೆ ಗೆಲುವಿತ್ತವರಾರು
ಬಂದ ಭಯಗಳನೆಲ್ಲ ಬಿಡಿಸುವರಾರು
ಮುಂದೆ ಮುಕ್ತಿಯನೀವ ಶಕ್ತ ಪ್ರಭುವಾರು
ತಂದೆ ಶ್ರೀಕಾಂತನಲ್ಲದೆ ಮತ್ತೆ ಯಾರು

--ದಾಸರ ಲಕ್ಷ್ಮೀನಾರಾಯಣರಾಯರು



ದಾಸ ಸಾಹಿತ್ಯ ಪ್ರಕಾರ
ಬರೆದವರು