ಹಾಲು ಮಾರಲು ಬಂದೆವಮ್ಮ

ಹಾಲು ಮಾರಲು ಬಂದೆವಮ್ಮ

(ಶ್ರೀ ರಾಗ ಆದಿತಾಳ) ಹಾಲು ಮಾರಲು ಬಂದೆವಮ್ಮ ಈ ಮಧುರಾಪುರಕ್ಕೆ ||ಪ|| ಸೀರೆ ಶೃಂಗಾರದ ಕುಪ್ಪಸವ ತೊಟ್ಟು ಹರಿನಾಮಗಳಿಟ್ಟು ದೋರೆ ಬಂಗಾರದ ಬಳೆ ಕೈಕಟ್ಟು ಕಳವಳಿಸುತಲಿಟ್ಟು ಕ್ಷೀರದ ಬುಟ್ಟಿ ಶಿರದಲಿಟ್ಟು ಮಾರಬಂದೆವೆ ನಂದನ ಕಂಡು ದಾರಿಯೊಳಗೆ ನಮ್ಮ ಗೊಲ್ಲನ ಕಂಡು ತಾರೆಂದು ಸುಂಕವ ಕರಹಿಡಕೊಂಡು ಘೋರಿಸುತ ನಾವುಟ್ಟ ಸೀರೆಯ ಸೆಳಕೊಂಡು || ಎಷ್ಟು ಹಟದವನೆ ಕೃಷ್ಣ ಚೋರ ಮುತ್ತಿನಸರ ಕಟ್ಟಾಣಿಗುಂಡಿನ ಜ್ಯೋಕಂಧವಳನ ಸರ ನೀಲದುಂಗುರ ಕೊಟ್ಟೇನೆಂದರೆ ರೊಕ್ಕಗಳಿಲ್ಲ ಕೃಷ್ಣ ಆರ್ಮಾತ ಕೇಳುವನಲ್ಲ | ಇಷ್ಟು ಮಾತಿಗೆ ದಿಟ್ಟನೋರೆ ಗೊಲ್ಲ || ಬಾಲೆ ಬಾರೆಂದು ಬಣ್ಣಿಸಿ ಕರೆವ ಹಸ್ತಗಳನೆ ಮುಗಿವ ತೋಳು ತೊಡೆ ಗಲ್ಲವ ಕುಚಗಳ ಪಿಡಿವ ಗಡಿಗೆಯ ಒಡೆವ ಥಾಲಿ ಥಾಲಿ ಹಾಲ್ ಮೊಸರನೆ ಸುರಿವ ಕಾಲಿಗೆ ಬಿದ್ದೆವೆ ಕಾಡಬೇಡೆಂದು ಭಾಳ ಹೊತ್ತಾಯಿತು ಹೋಗಬೇಕೆಂದು ಶ್ರೀಹರಿ ಪುರಂದರವಿಠಲನ ದಯದಿಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು