ಸಲ್ಲದೊ ಕೃಷ್ಣ ಸಲ್ಲದೊ

ಸಲ್ಲದೊ ಕೃಷ್ಣ ಸಲ್ಲದೊ

( ರಾಗ ಕಲ್ಯಾಣಿ ಅಟತಾಳ) ಸಲ್ಲದೊ ಕೃಷ್ಣ ಸಲ್ಲದೊ ||ಪ|| ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ ||ಅ|| ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನ್ನು ಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವದು || ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ ಪಾವಕನುರಿಗೆ ನೀನೊಪ್ಪಿಸಿ ಕೊಡುವುದು || ಕುಶಲದಿ ಬಣ್ಣಿಸಿ ಬರೆದು ಚಿತ್ತಾರವ ಮಸಿ ಮಣ್ಣು ಮಾಡಿ ನೀ ಕೆಡಿಸುವುದು || ಬಲು ಕಾಲ ಮುದ್ದಿಸಿ ಕಲಿಸಿ ಮಾತುಗಳ ಗಿಳಿಯ ಸಾಕಿ ಬಾವುಗಗೆ ಒಪ್ಪಿಸುವುದು || ಕರುಣಿಸು ಗುರು ಪುರಂದರವಿಟ್ಠಲ ನಮ್ಮ ಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು