ನೀ ಕೊಡೆ ನಾ ಬಿಡೆ

ನೀ ಕೊಡೆ ನಾ ಬಿಡೆ

(ರಾಗ ಶಂಕರಾಭರಣ ಅಟ ತಾಳ ) ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ ||ಪ|| ನೋಡುವೆ ನಿನ್ನನು ಪಾಡುವೆ ಗುಣಗಳ ಬೇಡುವೆ ಕಾಡುವೆ ನಾಡೊಳಗೆ ಮೋಡಿಯ ಬಿಡು ಬಿಡು ಮೊದಲಿಗ ಬಡ್ಡಿಯ ಕಾಡಲಿ ತುರುಗಳ ಕಾಯ್ದ ರನ್ನ || ಎಂಟಕ್ಷರವಿದೆ ಹೃದಯಸಾಕ್ಷಿಗಳಿವೆ ಗಂಟೆಗೆ ಮೋಸವೆ ದಾಸನಿಗೆ ಎಂಟೆಟೆನಿಸುವ ಬಂಟನ ಕೈಯಲಿ ತುಂಟತನವ ಬಿಡೊ ತುಡುಗರಸೊ || ಅಪ್ಪ ಶ್ರೀ ಕೃಷ್ಣನೆ ಅಮರರಿಗೊಲಿದನೆ ಸರ್ಪನ ಮೇಲೊರಗಿಪ್ಪವನೆ ಒಪ್ಪಿಸಿ ಕೊಟ್ಟರೆ ಪುರಂದರವಿಠಲನ ಒಪ್ಪುತ ಪಾಡುವೆ ನಡೆ ಮನೆಗೆ || ( ಪಾಠಾಂತರ :- ಆಗಭೋಗಗಳಿವೆ ಅನುಭೋಗಗಳಿವೆ ಈಗಲೆ ಕೊಡೆನಗೆ ಮುಕ್ತಿಯನು ನಾಗಶಯನ ಶ್ರೀಪುರಂದರವಿಠಲನೆ ಬೇಗನೆ ಕೊಡು ಸಾಯುಜ್ಯವನು || )
ದಾಸ ಸಾಹಿತ್ಯ ಪ್ರಕಾರ
ಬರೆದವರು