ನಾರಾಯಣ ನಿನ್ನ ನಾಮಾಮೃತವನು

ನಾರಾಯಣ ನಿನ್ನ ನಾಮಾಮೃತವನು

(ರಾಗ ಸಾವೇರಿ ಛಾಪುತಾಳ) ನಾರಾಯಣ ನಿನ್ನ ನಾಮಾಮೃತವನು ನಾಲಿಗೆಯಲಿ ನಿಲಿಸಯ್ಯ ||ಪ|| ಧರಧರಾನಿಭ ಚಾರು ಶೃಂಗಾರಶೇಖರ ತರಳ ನಾರಸಿಂಹ ||ಅ.ಪ|| ನಾರದಸನ್ನುತ ನೀರಜನಾಭ ಸುಹಾರ ಉದಾರ ಅಪಾರ ದಯಾಕರ ಭೂರಮಣೇಶ ವಿಚಾರವಿದೂರ ಮುರಾರಿ ತ್ರಿವಿಕ್ರಮನೆ ಸೇರಿದೆ ನಿನ್ನನು ಕೋರಿದ ವರಗಳ ಬೀರುವೆನೆಂದು ವಿಚಾರ ಬಿಡಿಸೊ ಎನ್ನ ಮಾರಜನಕ ನಿನ್ನಾದರದಲಿ ಎನ್ನ ಸೆರೆ ತೆಗೆಯೋ ಶ್ರೀಶೂರತನಯ ಹರಿ|| ಅಂಡವಾಹನ ಕುಂಡಲಿಶಯನ ಪ್ರಚಂಡವಿಕ್ರಮ ರಿಪುಖಂಡನ ಈ ಕ್ಷಿತಿ- ಮಂಡಲದೊಳು ಉದ್ದಂಡ ದೈತ್ಯರ ಚೆಂಡಿಪ ನರಹರಿಯೆ ಪುಂಡರೀಕಾಕ್ಷ ವೇದಾಂತ ರಕ್ಷಣ ಮಣಿಕುಂಡಲಧರ ಅಖಂಡಲನುತ ರವಿ ಮಂಡಲಾಶ್ರಿತ ಬ್ರ- ಹ್ಮಾಂಡನಾಯಕ ನಿನ್ನ ತೊಂಡನ ರಕ್ಷಿಸೊ ಪಾಂಡವಪ್ರಿಯ ಹರಿ || ಮಂದರಧರ ಗೋವಿಂದಜನಾರ್ಧನ ಇಂದುವದನ ಮಕರಂದಭೂಷಣ ಗೋ- ವೃಂದಗಳಿಗೆ ಆನಂದವ ತೋರುವ ಅಂತರಂಗದಿ ನೀನೆ ಕಂದನ ಲಾಲಿಸು ಇಂದಿಗೆ ಎನ್ನನು ಸಲಹಬೇಕೆಂದು ಬೇಡುವೆ ಮುಚುಕುಂದವರದ ತಂದೆ ಎನ್ನ ರಕ್ಷಿಸೊ ದೀನಬಂಧು ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು