ನಾರಾಯಣ ಗೋವಿಂದ

ನಾರಾಯಣ ಗೋವಿಂದ

(ರಾಗ ಧನಶ್ರೀ ಆದಿತಾಳ ) ನಾರಾಯಣ ಗೋವಿಂದ ಹರಿ ನಾರಾಯಣ ಗೋವಿಂದ ||ಪ|| ನಾರಾಯಣ ಗೋವಿಂದ ಮುಕುಂದ ಪರತರ ಪರಮಾನಂದ ||ಅ|| ಮೊದಲು ಮತ್ಸ್ಯನಾಗಿ ಉದಿಸಿ ಸೋಮನ ಸದೆದು ವೇದಗಳ ತಂದ || ಮಂದರಗಿರಿ ಸಿಂಧುವಿನೊಳಮೃತ ತಂದು ಭಕ್ತರಿಗುಣಲೆಂದ || ಭೂಮಿಯ ಕದ್ದ ಖಳನ ಮರ್ದಿಸಿ ಆ ಮಹಾ ಸತಿಯಳ ತಂದ || ದುರುಳ ಹಿರಣ್ಯಕನ ಕರುಳ ಬಗೆದು ತನ್ನ ಕೊರಳೊಳಿಟ್ಟ ಬಗೆಯಿಂದ || ಪುಟ್ಟನಾಗಿ ಮಹಿ ಕೊಟ್ಟ ಬಲಿಯ ತಲೆ ಮೆಟ್ಟಿ ತುಳಿದ ಬಗೆಯಿಂದ || ಧಾತ್ರಿಯೊಳು ಮುನಿಪುತ್ರನಾಗಿ ಬಂದು ಕ್ಷತ್ರಿಯರೆಲ್ಲರ ಕೊಂದ || ಮಡದಿಗಾಗಿ ಸರಗಡಲನೆ ಕಟ್ಟಿ ಹಿಡಿದು ರಾವಣನ ಕೊಂದ || ಗೋಕುಲದಿ ಹುಟ್ಟಿ ಗೋವ್ಗಳ ಕಾಯ್ದ ಗೋಪಾಲಕೃಷ್ಣ ತಾ ಬಂದ || ಛಲದಲಿ ತ್ರಿಪುರರ ಸತಿಯರ ವ್ರತದ ಫಲವನಳಿದ ಬಗೆಯಿಂದ || ಧರೆಯೊಳು ಪರಮ ನೀಚರ ಸವರೆ ಕುದುರೆಯೇರಿದ ಕಲಿ ಚಂದ || ದೋಷದೂರ ಶ್ರೀಪುರಂದರವಿಠಲ ಪೋಷಭಕ್ತಸುವೃಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು