ನಾರಾಯಣ ಎನ್ನಬಾರದೆ

ನಾರಾಯಣ ಎನ್ನಬಾರದೆ

(ರಾಗ ಬಿಲಹರಿ ಆದಿತಾಳ ) ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು ಮುಳ್ಳು ಮುರಿದಿಹುದೆ , ಕಲ್ಲು ಜಡಿದಿಹುದೆ ||ಪ|| ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ ನೀರ ಕಾವಡಿ ಪೊತ್ತು ತಿರುಗಲೇಕೆ ಊರೂರು ತಪ್ಪದೆ ದೇಶಾಂತರವೇಕೆ ದಾರಿಗೆ ಸಾಧನವಲ್ಲವೆ ಹರಿನಾಮ || ನಿತ್ಯುಪವಾಸವಿದ್ದು ಹಸಿದು ಬಳಲಲೇಕೆ ಮತ್ತೆ ಚಳಿಯೊಳು ಗಂಗೆ ಮುಳುಗಲೇಕೆ ಹಸ್ತವ ಪಿಡಿದು ಮಾಡುವ ಜಪ ತಪವೇಕೆ ಮುಕ್ತಿಗೆ ಸಾಧನವಲ್ಲವೆ ಹರಿನಾಮ || ಸತಿಸುತರನು ಬಿಟ್ಟು ಯತಿಗಳಾಶ್ರಮವೇಕೆ ವ್ರತ ಕೃಚ್ಛ್ರ ನೇಮ ನಿಷ್ಠೆಗಳೇತಕೆ ಪೃಥಿವಿಯೊಳಗೆ ನಮ್ಮ ಪುರಂದರವಿಠಲನ ಅತಿಶಯದಿಂದೊಮ್ಮೆ ನೆನೆದರೆ ಸಾಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು